ಚಿಂಚೋಳಿ: ತಾಲೂಕಿನ ಸೇಡಂ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶಿರೋಳ್ಳಿ ಗ್ರಾಮ ಹಾಗೂ ತಾಂಡದಲ್ಲಿ ಭಾರಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಗ್ರಾಮಸ್ಥರ ಧವಸ ಧಾನ್ಯ ಹಾಳಾಗಿರುವ ಕಾರಣ ಬಾಲರಾಜ್ ಗುತ್ತೇದಾರ ಬ್ರಿಗೇಡ್ ವತಿಯಿಂದ ಜೆಡಿಎಸ್ ಮುಖಂಡ ಬಾಲರಾಜ್ ಆಹಾರ ಕಿಟ್ ವಿತರಣೆ ಮಾಡಿದರು.
ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಗ್ರಾಮಸ್ಥರೊಂದಿಗೆ ಚರ್ಚಿಸಿ ಪರಿಹಾರ ಒದಗಿಸಬೇಕು. ನಿರ್ಲಕ್ಷ ಮಾಡಿದರೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಬಾಲರಾಜ್ ಎಚ್ಚರಿಕೆ ನೀಡಿ, ಕೂಡಲೆ ಪರಿಹಾರ ನೀಡಬೇಕು ಎಂದು ಹೇಳಿದರು .
ಈ ಸಂದರ್ಭದಲ್ಲಿ ಮುಖಂಡ ಶಾಂತಕುಮಾರ್ ಹಿರೇಮಠ್, ತಿಪ್ಪಾರೆಡ್ಡಿ, ನಸೀರ್ ಪಟೇಲ್, ಪರಶುರಾಮ್ ನಾಯಕ, ಶರಣಪ್ಪ, ಬಸವರಾಜ್ ತಳವಾರ್, ಹಸನಪ್ಪ ಮೇತ್ರಿ , ಶರಣು ತಳವಾರ್, ಸಂತೋಷ್ ಕೆರಳ್ಳಿ, ವೀರೇಶ್ ಇನ್ನಿತ್ತರರಿದ್ದರು.