ಅಧಿಕಾರಿಗೆ ವಜಾ ಆಗ್ರಹ

ಅಧಿಕಾರಿಗೆ ವಜಾ ಆಗ್ರಹ

ಕೊಲ್ಹಾರ : ಕೆಪಿಸಿಸಿ ರಾಜ್ಯಧ್ಯಕ್ಷರ ಪ್ರತಿಜ್ಞಾವಿಧಿ ಸಭೆ ಕುರಿತು ತಾಲೂಕಿನ ಕೂಡಗಿ ಗ್ರಾಮ ಪಂಚಾಯತಿಯಲ್ಲಿ ಕೊಲ್ಹಾರ ತಾಲೂಕಿನ ಕಾಂಗ್ರೇಸ್ ಮುಖಂಡರು ವಿಡಿಯೋ ಕಾನ್ಸರೆನ್ಸ್ ಮಾಡಿದ್ದಾರೆಂದು ಆರೋಪಿಸಿ ಹಾಗೂ ಇದಕ್ಕೆ ಅವಕಾಶ ಮಾಡಿಕೊಟ್ಟ ಕೂಡಗಿ ಗ್ರಾ.ಪಂ. ಅಧಿಕಾರಿ ಹಾಗೂ ಕಾಂಗ್ರೇಸ್ ಮುಖಂಡರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಬಿಜೆಪಿ ಮುಖಂಡರು ಆಗ್ರಹಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕೆಪಿಸಿಸಿ ರಾಜ್ಯಾಧ್ಯಕ್ಷರ ಪದಗ್ರಹಣದ ಸಭೆಗಳನ್ನು ಸ್ವಪಕ್ಷದ ಕಚೇರಿಗಳಲ್ಲಿ ನಡೆಸಬೇಕೆಂದು ಕಾಂಗ್ರೇಸ್ ಪಕ್ಷದ ವರಿಷ್ಠರು ಕಾರ್ಯಕರ್ತರಿಗೆ ಸ್ಪಷ್ಟ ಸೂಚನೆ ನೀಡಿದರೂ, ಸ್ಥಳಿಯ ಕಾಂಗ್ರೇಸ್ ಮುಖಂಡರು ಪಕ್ಷಕ್ಕೆ ಸಂಬಂಧಿಸಿದ ವಿಡಿಯೋ ಕಾನ್ಸರೆನ್ಸ್ ಹಾಗೂ ಸಭೆಗಳನ್ನು ಕೂಡಗಿ ಗ್ರಾಮ ಪಂಚಾಯತಿಯಲ್ಲಿ ನಡಸಿರುವದು ತೀವ್ರ ಖಂಡನೀಯ.

ಬೇರೆ ತಾಲೂಕುಗಳಲ್ಲಿ ಇದೇ ವಿಷಯದ ಕುರಿತು ಕಾಂಗ್ರೇಸ್ ಸಭೆಗಳು ಗ್ರಾಮ ಪಂಚಾಯತಿಗಳಲ್ಲಿ ಜರುಗಿರುವ ಕುರಿತು ಎಲ್ಲಾ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿವೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕೂಡಲೆ ಕೂಡಗಿ ಗ್ರಾ.ಪಂ. ಅಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮುಖಂಡ ಮಲ್ಲಿಕಾರ್ಜುನ ಎಸ್. ಬೆಳ್ಳುಬ್ಬಿ ಒತ್ತಾಯಿಸಿದರು.

Related