ಧಾರವಾಡ ಸ್ತಬ್ದ

ಧಾರವಾಡ  ಸ್ತಬ್ದ

ಧಾರವಾಡ : ಬೆಳಗ್ಗೆಯೇ ಎಪಿಎಂಸಿ ಹಾಗೂ ಕೃಷಿಗೆ ಮಾರಕವಾಗಿರುವ ಕಾಯ್ದೆ ರದ್ದತಿಗೆ ಆಗ್ರಹಿಸಿ ಕೇಂದ್ರದ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸಿ ನಡೆಸುತ್ತಿರುವ ಬಂದ್‌ಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಂದ್ ಹಿನ್ನೆಲೆ ಜುಬಿಲಿ ವೃತ್ತಕ್ಕೆ ಚಕ್ಕಡಿ ತಂದ ಜಯ ಕರ್ನಾಟ ಸಂಘಟನೆ ಕಾರ್ಯಕರ್ತರು ಚಕ್ಕಡಿಯಲ್ಲಿ ವೃತ್ತಕ್ಕೆ ಸುತ್ತು ಹಾಕಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ವಿಭಿನ್ನವಾಗಿ ಪ್ರತಿಭಟಿಸಿದರು.

ಮಂಗಳವಾರ ನಡೆಯಬೇಕಿದ್ದ ವಿಳ್ಯದೆಲೆ ಮಂಡಿಗೆಗಳ ಹರಾಜು ನಿಲ್ಲಿಸಿದ ವ್ಯಾಪಾರಿಗಳು ಬಂದ್‌ಗೆ ಬೆಂಬಲ ನೀಡಿದರೆ, ಬೀದಿ ಬದಿ ವ್ಯಾಪಾರಿಗಳು ಕೂಡ ಬಂದ್‌ಗೆ ಬೆಂಬಲ ನೀಡಿದ್ದಾರೆ.

ಬಸ್ ಸಂಚಾರ ಸ್ಥಗಿತಗೊಳಿಸುವಂತೆ ಹೋರಾಟಗಾರರಿಂದ ನಿಲ್ದಾಣದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡ ಬಳಿಕ ಬಸ್ ಸಂಚಾರ ಸ್ಥಗಿತಗೊಂಡಿತು. ಹೊಸ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ರೈತರು ಬಂದ್ ಗೆ ಬೆಂಬಲ ನೀಡುವಂತೆ ಕೈ ಮುಗಿದು ಮನವಿ ಮಾಡಿದರು.

 

Related