ಮಗನಿಂದ ತಂದೆಯ ಮರಣ

ಮಗನಿಂದ ತಂದೆಯ ಮರಣ

ಮಂಡ್ಯ  :   ಪಾಂಡವಪುರ ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ತಾಯಿಗೆ ರಾಡಿನಿಂದ ಹೊಡೆದುದ್ದನ್ನು ಕಂಡು ಸಹಿಸಲಾಗದೆ ಕೋಪಗೊಂಡ ಪುತ್ರನೊಬ್ಬ ತಂದೆಗೆ ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ರಾತ್ರಿ ನಡೆದಿದೆ.

ರಾಗಿಮುದ್ದನಹಳ್ಳಿ ಗ್ರಾಮದ ದೇವರಾಜು (45) ಕೊಲೆಯಾದ ವ್ಯಕ್ತಿ. ಈತನ ಪುತ್ರನೇ ಅಪ್ಪು(18) ಕೊಲೆ ಮಾಡಿದ ಆರೋಪಿಯಾಗಿದ್ದು, ಘಟನೆ ಬಳಿಕ ನಾಪತ್ತೆಯಾಗಿದ್ದಾನೆ.
ಈ ವೇಳೆ ಗಂಡ ಹೆಂಡತಿ ನಡುವೆ ಮಾತಿಗೆ ಮಾತು ಬೆಳೆದಾಗ ಕುಪಿತನಾದ ದೇವರಾಜು ತನ್ನ ಪತ್ನಿಗೆ ರಾಡಿನಿಂದ ಹೊಡೆದನು. ಪೆಟ್ಟು ತಿಂದ ಸಾವಿತ್ರಮ್ಮ ಕುಸಿದು ಬಿದ್ದಿದ್ದನ್ನು ಕಂಡ ಮಗ ಅಪ್ಪು ಕೋಪಗೊಂಡು ತಂದೆ ದೇವರಾಜುಗೆ ಚಾಕುವಿನಿಂದ ಇರಿದಿದ್ದಾನೆ.

ಕೂಡಲೇ ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ಕರೆತಂದರು. ಅಲ್ಲಿಂದ ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ದೇವರಾಜು ಬುಧವಾರ ಮಧ್ಯರಾತ್ರಿ ಮೃತಪಟ್ಟನು ಎಂದರು.

ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related