ಬಂಗಾರಪೇಟೆ : ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನೆಡೆದ ಪತ್ರಕರ್ತರ ಮೇಲಿನ ಮಾರಣಾಂತಿಕ ಹಲ್ಲೆ, ಮತ್ತು ದೆಹಲಿ ಮಾದರಿಯ ಗ್ರೇಡ್ -6 ಪೋಲಿಸ್ ಠಾಣೆಯನ್ನ ಧ್ವಂಸಗೊಳಿಸಿ, ಹಲ್ಲೆ ನೆಡೆಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಅವರುಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಸಂಪಾದಕರ ಹಾಗೂ ವರದಿಗಾರರ ಸಂಘದ ಆಗ್ರಹಿಸಿದರು.
ಅಧ್ಯಕ್ಷರು ಕಾಂತರಾಜ್ ರವರ ನೇತೃತ್ವದಲ್ಲಿ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಪ್ರತಿಭಟಿಸಿ ತಾಲ್ಲೂಕು ಉಪ ತಹಸೀಲ್ದಾರರು ಮುಕ್ತಾಂಭ ರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.