ಡಿ ಬಾಸ್ ಅಬ್ಬರದ ಪ್ರಚಾರ

ಡಿ ಬಾಸ್ ಅಬ್ಬರದ ಪ್ರಚಾರ

ಬೊಮ್ಮನಹಳ್ಳಿ: ಮೂರು ಬಾರಿ ತಮ್ಮ ಅಮೂಲ್ಯವಾದ ಮತ ನೀಡಿ ಸತೀಶ್ ರೆಡ್ಡಿರವರನ್ನು ಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾಗಿ ಗೆಲ್ಲಿಸಿದ್ದಿರಾ. ಈ ಬಾರಿ ಮತ ನೀಡಿದರೆ ಸಚಿವರಾಗುತ್ತಾರೆ. ಹಾಗಾಗಿ ಈ ಬಾರಿ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿಗೆ ಮತ ನೀಡಬೇಕು ಎಂದು ನಟ ದರ್ಶನ್ ಮತದಾರ ಬಳಿ ಮನವಿ ಮಾಡಿದರು.

ಅವರು ಇಂದು ಬೊಮ್ಮನಹಳ್ಳಿ ಕ್ಷೇತ್ರದ ವಿಜಯಾ ಬ್ಯಾಂಕ್‌ ಲೇಔಟ್ ನಿಂದ ಪುಟ್ಟೇನಹಳ್ಳಿ ವರೆಗೆ ಬೈಕ್ ರ್ಯಾಲಿ ಮತ್ತು ರೋಡ್ ಶೋ ನಡೆಸಿದ ದರ್ಶನ್ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಪರ ಮತಯಾಚನೆ ಮಾಡಿದರು.

ಹೊಸ ಡಾಕ್ಟರ್ ಗಿಂತ ಹಳೆ ಕಾಂಪೂಂಡರ್ ಮೇಲು ಎಂದು ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ್ ಗೌಡರಿಗೆ ಟಾಂಗ್ ನೀಡಿದ ನಟ ದರ್ಶನ್, ಸತೀಶ್ ರೆಡ್ಡಿ ಪರ ಭರ್ಜರಿ ಪ್ರಚಾರ ನಡೆಸಿದರು. ಇದೇ ವೇಳೆ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಮಾತನಾಡಿ ಬೊಮ್ಮನಹಳ್ಳಿ ಕ್ಷೇತ್ರ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ್ ಗೌಡ ಕೇವಲ ಮತಕ್ಕಾಗಿ ಜಾತಿ ಜಾತಿಗಳ ನಡುವೆ ಕಂದಕ ಸೃಷ್ಟಿಸುತ್ತಿದ್ದಾರೆ ಎಂದು ಸತೀಶ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಇಪ್ಪತ್ತು ವರ್ಷಗಳ ಕಾಲ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಶಾಸಕನಾಗಿ ಜನಪರ ಆಡಳಿತ ನೀಡಿದ್ದೆನೆ. ಇಂದು ಜನ ವ್ಯಕ್ತಪಡಿಸುತ್ತಿರುವ ಬೆಂಬಲ ಸಾಕ್ಷಿಯಾಗಿದೆ. ಆದ್ರೆ ನನಗೆ ದೊರೆಯುತ್ತಿರುವ ಜನ ಬೆಂಬಲ ಕಂಡು ಕಾಂಗ್ರೆಸ್ಸಿಗರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಉತ್ತರ ನೀಡಲಿದ್ದಾರೆ. ಅಲ್ಲದೆ ಕೊರೊನಾ ಸಂದರ್ಭದಲ್ಲಿ ಇಡೀ ಕ್ಷೇತ್ರದ ಜನತೆಗೆ ಹಗಲಿರುಳು ಜನರ ಸೇವೆ ಮಾಡಿದ್ದೆವೆ. ಅದ್ರಲ್ಲು ಕಾರ್ಮಿಕರಿಗೆ ವ್ಯಾಕ್ಸಿನ್, ಆಹಾರ ದಾನ್ಯ ಸೇರಿದಂತೆ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಇಂದು ಕಾರ್ಖಾನೆಗಳಿಗೆ ತೆರಳಿ ಕಾರ್ಮಿಕರನ್ನು ಭೇಟಿ ಮಾಡಿದ್ದು, ಈ ವೇಳೆ ಕಾರ್ಮಿಕರ ಕಣ್ಣುಗಳಲ್ಲಿ ಕೃತಜ್ಞತಾ ಭಾವ ಕಂಡು ಬಂತು. ಹಾಗಾಗಿ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಪಕ್ಷಾತೀತವಾಗಿ ಜಾತ್ಯಾತೀತವಾಗಿ ಜನ ಬಿಜೆಪಿಗೆ ಮತ ಚಲಾವಣೆ ಮಾಡಲಿದ್ದು, ನಿರೀಕ್ಷೆಯಂತೆ 75 ಸಾವಿರ ಮತಗಳ ಅಂತರದಲ್ಲಿ ಜಯಭೇರಿ ಬಾರಿಸುವುದಾಗಿ ಸತೀಶ್ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

Related