ಡಿಸಿ ಗನ್‌ಮ್ಯಾನ್‌ಗೆ ಕೊರೋನಾ

ಡಿಸಿ ಗನ್‌ಮ್ಯಾನ್‌ಗೆ ಕೊರೋನಾ

ಯಾದಗಿರಿ : ಜಿಲ್ಲೆಯಲ್ಲಿ ಜಿಲ್ಲಾಡಳಿತ ಭವನದಿಂದಲೇ ಜಿಲ್ಲಾಧಿಕಾರಿ ಸೇರಿ ಹಲವಾರು ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಕೊರೋನಾ ಕೋವಿಡ್ ವಿರುದ್ಧ ಹೋರಾಟ ಮಾಡುತ್ತಿರುವ ವಾರಿಯರ್ಸ್ ಗೆ ಈಗ ಸೋಂಕು ವಕ್ಕರಿಸಿದೆ.

ಡಿಸಿ ಗನ್ ಮ್ಯಾನ್ ಗೆ ಕೊರೋನಾ ಯಾದಗಿರಿ ಜಿಲ್ಲಾಧಿಕಾರಿ ಎಂ. ಕೂರ್ಮರಾವ್ ಅವರ ಗನ್ ಮ್ಯಾನ್ ಗೆ ಕೂಡ ಕೊರೋನಾ ವಕ್ಕರಿಸಿದೆ. ಗನ್ ಮ್ಯಾನ್ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಹೊರಗುತ್ತಿಗೆ ವಾಹನ ಚಾಲಕ, ಡಿಸಿ ಅವರ ಆಪ್ತ ಸಹಾಯಕನಿಗೆ ಸೋಂಕು ಪತ್ತೆಯಾಗಿದೆ.

ಬೆಂಗಳೂರಿನಿಂದ ಬಂದಿದ್ದಕ್ಕೆ ಕೊರೋನಾ ಕಾಣಿಸಿಕೊಂಡಿದೆಯಾ ಅಥವಾ ಜಿಲ್ಲಾಡಳಿತ ಭವನದಲ್ಲಿ ಬರುವ ಯಾರಾದರೂ ಸೋಂಕಿತರಿಂದ ಕೊರೋನಾ ವಕ್ಕರಿಸಿದೆಯಾ ಎಂಬುದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಅಧಿಕೃತ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುವುದು ಬಾಕಿ ಇದೆ. ಹೋಂ ಕ್ವಾರೆಂಟೈನ್ ನಲ್ಲಿ ಡಿಸಿ ಕೂರ್ಮರಾವ್ !

ಈಗಾಗಲೇ ಜಿಲ್ಲಾಡಳಿತ ಭವನ ಸೀಲ್ ಡೌನ್ ಮಾಡಲಾಗಿದ್ದು, ಮೂರು ದಿನಗಳ ಕಾಲ ಜಿಲ್ಲಾಡಳಿತ ಭವನದೊಳಗೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಮಾಡಲಾಗಿದೆ. ಡಿಸಿ ಭವನದಲ್ಲಿ ಕೊರೊನಾ ಪತ್ತೆಯಾದ ಹಿನ್ನೆಲೆ ಜಿಲ್ಲಾಡಳಿತ ಭವನ ಸಂಪೂರ್ಣ ಸ್ಯಾನಿಟೈಸ್       ಮಾಡಲಾಗುತ್ತಿದೆ.ಮೂರು ದಿನಗಳ ಕಾಲ ಸೋಂಕು ನಿವಾರಕ ಸಿಂಪಡಣೆ ಮಾಡಿ ಅಗತ್ಯ ಮುಂಜಾಗ್ರತೆ ವಹಿಸಲಾಗಿದೆ.

Related