ಕೋವಿಡ್ ವಿಶೇಷಾಧಿಕಾರಿ ನೇಮಕ

ಕೋವಿಡ್ ವಿಶೇಷಾಧಿಕಾರಿ ನೇಮಕ

ಮೈಸೂರು , ಏ. 14 : ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಜಿಲ್ಲೆಗೆ ವಿಶೇಷಾಧಿಕಾರಿಯನ್ನು ನೇಮಕ ಮಾಡಲಾಗಿದೆ.
ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಜ್ಯುಬಿಲಿಯೆಂಟ್ ನ ಹಲವು ನೌಕರರಿಗೆ ಸೋಂಕು ತಗಲಿದೆ. ಆದಕಾರಣ ಜಿಲ್ಲೆಗೆ ಕೋವಿಡ್ ವಿಶೇಷಾಧಿಕಾರಿಯಾಗಿ ಡಾ.ಹರ್ಷಗುಪ್ತ ನೇಮಕ ಮಾಡಿದ್ದಾರೆ. ಜ್ಯುಬಿಲಿಯೆಂಟ್ ನೌಕರರಿಗೆ ಸೋಂಕು ತಗಲಿದ ಹಿನ್ನಲೆ ಈ ಬಗ್ಗೆ ತನಿಖೆ ನಡೆಸಲು  ಸರ್ಕಾರ ಹರ್ಷಗುಪ್ತ ಅವರನ್ನು ನೇಮಿಸಿದೆ ಎನ್ನಲಾಗಿದೆ.

 

 

Related