ಸಾಮಾಜಿಕ ಅಂತರ ಕಾಯ್ದುಕೊಳ್ಳಿ

ಸಾಮಾಜಿಕ ಅಂತರ ಕಾಯ್ದುಕೊಳ್ಳಿ

ಗಜೇಂದ್ರಗಡ : ಕೋವಿಡ್ ಎಂಬ ಮಹಾಮಾರಿ ಜಗತ್ತನ್ನೇ ಬೆಚ್ಚಿ ಬಿಳಿಸಿದೆ. ಈ ದಿಸೆಯಲ್ಲಿ ಸಾರ್ವಜನಿಕರು ಜಾಗೃತರಾಗಿ, ಮುಖಕ್ಕೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು, ಸರ್ಕಾರಿ ಬಿ.ಎಸ್.ಎಸ್ ಕಾಲೇಜ್ ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗ ಹಾಗೂ ಸ್ಥಳೀಯ ಪೋಲಿಸ್ ಇಲಾಖೆಯ ನೆರವಿನೊಂದಿಗೆ ಕೊರೋನಾ ಜಾಗೃತಿ ಜಾಥಾದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಿದರು.

ಕಾಲೇಜೀನ ಪ್ರಾಚಾರ್ಯರಾದ ಎಸಎಸ್ ಕೆಂಚನಗೌಡ್ರು, ಡಾ. ಪಿ ಎಚ್ ಕ್ಯಾರೆಕೊಪ್ಪ, ಉಪನ್ಯಾಸಕರಾದ ಲಕ್ಷ್ಮೀ ಮಿತ್ರಾ, ಸರಸ್ವತಿ ಕೆ, ಲಕ್ಕಣ್ಣ ಇಎನ್, ಮಹೇಂದ್ರ ಜೀ, ಕರುಣೇಶ ಕೆ, ಮಹಾಂತೇಶ ಜಿವಣ್ಣನವರ, ಹಿತೇಶ ಬಿ, ರೂಪಾ ಟ.ಪಿ,  ಸಿದ್ದೇಶ ಕೆ,  ಸಿಬ್ಬಂದಿಗಳಾದ ರುದ್ರಮ್ಮ ಸುಂಕದ ಕಾಲೇಜಿನ ಎಲ್ಲಾ ವಿಧ್ಯಾರ್ಥಿಗಳು ಭಾಗವಹಿಸಿದ್ದರು.

Related