ಕೊರೋನಾಗೆ ವಿಶೇಷ ಪೂಜೆ

ಕೊರೋನಾಗೆ ವಿಶೇಷ ಪೂಜೆ

ಗಂಗಾವತಿ : ನಮ್ಮ ದೇಶ, ರಾಜ್ಯದಲ್ಲಿ ಕೊರೋನಾ ಹರಡದಂತೆ ತಾಲ್ಲೂಕಿನ ಆನೆಗುಂದಿ ಹತ್ತಿರದ ದೇವಸ್ಥಾನದಲ್ಲಿ ಆದಿ ಶಕ್ತಿ ದುರ್ಗಾದೇವಿಗೆ ಶಾಸಕ ಪರಣ್ಣ ಮುನವಳ್ಳಿ ಅವರು ಹೋಮ ಪೂಜೆ ಹಾಗೂ ಗೋ ಮಾತೆಗೆ ಪೂಜೆ ಸಲ್ಲಿಸಿದರು.

ಕೊಪ್ಪಳ ಜಿಲ್ಲೆಯ ಜನತೆಗೆ ಕೊರೋನ ವೈರಸ್ ಹರಡದಂತೆ ಈಗಾಗಲೇ ಮುಂಜಾಗ್ರತೆ ವಹಿಸಲಾಗಿದ್ದು, ಜನರಲ್ಲಿ ಜಾಗೃತಿಯನ್ನು ಮೂಡಿಸಲಾಗಿದೆ.

ಆದಿ ಶಕ್ತಿ ದುರ್ಗಾದೇವಿಗೆ, ಮತ್ತು ಗೋ ಮಾತೆಗೆ ವಿಶೇಷವಾಗಿ ಪೂಜೆ ಸಲ್ಲಿಸುವುದರ ಮೂಲಕ ತಾಯಿ ದುರ್ಗಾದೇವಿಗೆ ನಮ್ಮನ್ನೆಲ್ಲಾ ಕಾಪಾಡಬೇಕು ಎಂದರು.

Related