ರಾಮದುರ್ಗ: ನಗರದಲ್ಲಿ ಕೋವಿಡ್-19 ಸೊಂಕು ಇಬ್ಬರಿಗೆ ದೃಡಪಟ್ಟ ಹಿನ್ನಲೆಯಲ್ಲಿ ಸೀಲ್ಡೌನ್ ಮಾಡಲ್ಪಟ್ಟ ನೇಕಾರ ಪೇಟೆಯ ವಿಠ್ಠಲ ಪೇಟೆ ಮತ್ತು ನ್ಯಾಯಾಲಯದ ಆವರಣ ಸೇರಿದಂತೆ ಸೋಂಕಿತರ ಮನೆಯ ಸುತ್ತಲು ಸೋಡಿಯಂ ಹೈಪೋಕ್ಲೋರೈಡನ್ನು ಸಿಂಪರಿಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ಶಶಿಧರ ಕಾಗವಾಡ ಮತ್ತು ಸಿಬ್ಬಂದಿ ವರ್ಗ ಅಗ್ನಿಶಾಮಕ ದಳದ ಸಿಬ್ಬಂದಿಯ ನೇರವಿನಿಂದ ಶೀಲ್ಡೌನ್ ಪ್ರದೇಶದಲ್ಲಿ ಮುನ್ನೇಚರಿಕೆಯಾಗಿ ಪುರಸಭೆ ಶ್ಯಾನಿಟೈಸ್ರ್ ಸಿಂಪರಣೆ ವ್ಯವಸ್ಥೆ ಮಾಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.