ಕಮಲನಗರ : ಮಹಾರಾಷ್ಟ್ರದ ಗಡಿ ಭಾಗದ ದಾಪಕಾ ಹೋಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶುಕ್ರವಾರ ತಹಶೀಲ್ದಾರ್ ರಮೇಶ್ ಪೇದೆ ಭೇಟಿ ನೀಡಿದರು. ನಂತರ ಮಾತನಾಡಿ ಅವರು ಗ್ರಾಮದಲ್ಲಿ ಲಸಿಕೆಯಿಂದ ವಂಚಿತಗೊಂಡ ಜನರಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಲು ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳು ಸಹಕಾರ ನೀಡಿ ಎಂದು ಮನವಿ ಮಾಡಿದರು. ಈ ಗ್ರಾಮವನ್ನು ಕೊರೋನಾ ಮುಕ್ತವಾಗಿ ಮಾಡವುದು ಆಶಾ ಕಾರ್ಯಕರ್ತರು, ಅಂಗನವಾಡಿ ಶಿಕ್ಷಕಿಯರು, ಗ್ರಾ. ಪಂ. ಅಭಿವೃದ್ಧಿ ಅಧಿಕಾರಿಗಳ ಕರ್ತವ್ಯ ಎಂದು ಹೇಳಿದರು.