ಜನತಾ ಕರ್ಪೂಯಗೆ ಸಹಕರಿಸಿ :ಸತೀಶ್ ರೆಡ್ಡಿ

ಜನತಾ ಕರ್ಪೂಯಗೆ ಸಹಕರಿಸಿ :ಸತೀಶ್ ರೆಡ್ಡಿ

ಬೊಮ್ಮನಹಳ್ಳಿ, ಮಾ. 20: ಮಾ.22ರ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರು ಮಹಾ ಮಾರಿ ಕೋವಿಡ್ ನಿಯಂತ್ರ ಜಾಗೃತಿಗೆ  ಕರೆ ನೀಡಿರುವ ಜನತಾ ಕರ್ಫ್ಯೂಗೆ ಸಹಕರಿಸುವಂತೆ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರು ಕ್ಷೇತ್ರದ ಜನತೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಭಾನುವಾರ ಬೆಳಿಗ್ಗೆ 7ರಿಂದ ರಾತ್ರಿ 9 ಗಂಟೆಯವರೆಗೂ ಕ್ಷೇತ್ರದ ಜನತೆಯ ಆರೋಗ್ಯ ಹಿತ ದೃಷ್ಟಿಯಿಂದ ಕೋವಿಡ್ ಎಂಬ ಮಹಾ ಮಾರಿಯನ್ನು ನಿಯಮತ್ರಿಸುವ ಉದ್ದೇಶದಿಂದ ನಾನೂ ಕೂಡಾ ಮನೆಯಿಂದ ಹೊರ ಬರುವುದಿಲ್ಲ ಕ್ಷೇತ್ರದ

ಜನತೆ ಕೂಡಾ ಹೊರ ಬರದಂತೆ ಕರೆ ನೀಡಿದ್ದಾರೆ.

ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೋನಾ ವೈರಸ್ ತಡೆಗಟ್ಟಲು ನಾವೆಲ್ಲರೂ ಜನತಾ ಕರ್ಫ್ಯೂಗೆ ಸಹಕರಿಸುವ ಅಗತ್ಯವಿದ್ದು, ಜನಸಂದಣಿ ಸೇರದಂತೆ ಮನವಿ ಮಾಡಿರುವ ಶಾಸಕ ಸತೀಶ್ ರೆಡ್ಡಿ ಅವರು ಪ್ರತಿಯೊಬ್ಬ ನಾಗರೀಕರು ಕೋವಿಡ್ ಮಹಾ ಮಾರಿಯನ್ನು ತಡೆಗಟ್ಟಲು ಮುಂಜಾಗ್ರತೆವಹಿಸ ಬೇಕಿದೆ ಎಂದು ತಿಳಿಸಿದ್ದಾರೆ.

ಬೊಮ್ಮನಹಳ್ಳಿ ವಿದಾನ ಸಭಾ ಕ್ಷೇತ್ರದ ಸಾರ್ವಜನಿಕರು ಭಾನುವಾರ ಬೆಳಿಗ್ಗೆಯಿಂದ ರಾತ್ರಿ 9 ಗಂಟೆಯವರೆಗೂ ಮನೆ ಬಿಟ್ಟು ಹೊರ ಬರದಂತೆ ಮನವಿ ಮಾಡಿರುವ ಸತೀಶ್ ರೆಡ್ಡಿ ಅವರು ನಾನೂ ಕೂಡಾ ಮನೆಯಿಂದ ಹೊರ ಬರುವುದಿಲ್ಲ ನೀವೂ ಕೂಡಾ ಹೊರ ಬಾರದೆ ಜನತಾ ಕರ್ಫ್ಯೂಗೆ ಬೆಂಬಲ ಸೂಚಿಸುವ ಮೂಲಕ ಕೊರೋನಾ ನಿಯಂತ್ರಣ ಮಾಡಲು ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿ ಎಂದು ಕರೆ ನೀಡಿದರು.

ಕೊರೊನಾದಂತಹ ಭಯಂಕರ ವೈರಸ್‌ನ್ನು ತಡೆಗಟ್ಟಲು ಸರ್ವರೀತಿಯಲ್ಲಿ ಸಾರ್ವಜನಿಕರು ಪಣತೊಟ್ಟು ಶುಚಿತ್ವವನ್ನು ಕಾಪಾಡಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದು ಜನಾಂದೋಲನವಾಗಬೇಕು ಮತ್ತು ಪ್ರತಿಯೊಬ್ಬ ನಾಗರಿಕನು ತನ್ನ ಅದ್ಯ ಕರ್ತವ್ಯ ಎಂದು ತಿಳಿದು ತನ್ನ ಪರಿಸರವನ್ನು ಹಾಗೂ ತನ್ನ ಕುಟುಂಬದ ಪ್ರತಿಯೊಬ್ಬರೂ ಶುಚಿತ್ವ ಕಾಪಾಡಿಕೊಳ್ಳಬೇಕೆಂದು ಶಾಸಕ ಸತೀಶ್ ರೆಡ್ಡಿ ಮನವಿ ಮಾಡಿದರು.

Related