ಮುಂದುವರೆದ ಖಾತೆ ಕ್ಯಾತೆ

ಮುಂದುವರೆದ ಖಾತೆ ಕ್ಯಾತೆ

ಬಳ್ಳಾರಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ, ಆಲಮಟ್ಟಿ ಅಣೆಕಟ್ಟಿಗೆ ಆಗಮಿಸಿ, ಕೃಷ್ಣೆಗೆ ಭಾಗೀನ ಅರ್ಪಿಸಲು ತೆರಳಿದ್ದರು. ಸಿಎಂ ಅವರನ್ನು ಸಚಿವ ಆನಂದ್ ಸಿಂಗ್ ಮಾತ್ರ ಭೇಟಿ ಮಾಡಲೇ ಇಲ್ಲ. ಈ ಮೂಲಕ ಖಾತೆ ಕ್ಯಾತೆ ಮುಂದುವರೆದಿದ್ದು ಕಂಡು ಬಂತು.
ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆಲಮಟ್ಟಿಗೆ ಬಾಗಿನ ಅರ್ಪಿಸೋ ಸಲುವಾಗಿ, ಜಿಂದಾಲ್ ಗೆ ಹೆಲಿಕಾಪ್ಟರ್ ಮೂಲಕ ತೆರಳಿದ್ದರು. ಇಲ್ಲಿಂದ ಕೃಷ್ಣೆಗೆ ಬಾಗೀನ ಅರ್ಪಿಸಿದ ನಂತರ ಹೆಲಿಕಾಪ್ಟರ್ ನಲ್ಲೇ, ವಿಜಯಪುರ ಜಿಲ್ಲೆಯ ಆಲಮಟ್ಟಿಗೆ ತೆರಳಿ ಬಾಗೀನ ಅರ್ಪಿಸಿದರು. ಸಿಎಂ ಬಂದ್ರು ಸಚಿವ ಆನಂದ್ ಸಿಂಗ್ ಮಾತ್ರ ಕಾಣಿಸಿಕೊಳ್ಳಲೇ ಇಲ್ಲ. ಶುಕ್ರವಾರ ಸಂಜೆ ಹೊಸಪೇಟೆಗೆ ಆಗಮಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಸ್ವತಃ ಸಚಿವ ಆನಂದ್ ಸಿಂಗ್ ಸ್ವಾಗತಿಸಿದ್ದರು. ಆದರೆ ಶನಿವಾರ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದರು ಅವರನ್ನು ಸ್ವಾಗತಿಸಲೂ ಇಲ್ಲ, ಭೇಟಿಯೂ ಆಗಲಿಲ್ಲ.

Related