ಸಿಎಂ ಆಗಲು ಈ ಹಿಂದಿನವರು ಎಷ್ಟು ಕೋಟಿ ಹಣ ಕೊಟ್ಟಿದ್ದಾರೆ ತನಿಖೆಯಾಗಬೇಕು : ಸಿದ್ದರಾಮಯ್ಯ ಆಗ್ರಹ

ಸಿಎಂ ಆಗಲು ಈ ಹಿಂದಿನವರು ಎಷ್ಟು ಕೋಟಿ ಹಣ ಕೊಟ್ಟಿದ್ದಾರೆ ತನಿಖೆಯಾಗಬೇಕು : ಸಿದ್ದರಾಮಯ್ಯ ಆಗ್ರಹ

ಬೆಳಗಾವಿ: ಈ ಹಿಂದಿನವರು ಸಿಎಂ ಆಗಲು ಎಷ್ಟು ಕೋಟಿ ಹಣ ಕೊಟ್ಟಿದ್ದಾರೆ ಇದರ ಬಗ್ಗೆ ತನಿಖೆ ಆಗಬೇಕು. ಬಿಜೆಪಿ ರಾಷ್ಟ್ರೀಯ ಅದ್ಯಕ್ಷರು ಕೇಳಿದ್ರಾ, ಅಮಿತ್ ಶಾ ಕೇಳಿದ್ರಾ ಅನ್ನೋದನ್ನ ತನಿಖೆ ಮಾಡಬೇಕು. ಸಿಎಂ ಬೊಮ್ಮಾಯಿ ಎಷ್ಟು ದುಡ್ಡು ಕೊಟ್ಟಿದ್ದಾರೆ ಅನ್ನೋದು ರಾಜ್ಯದ ಜನರಿಗೆ ಗೊತ್ತಾಗಬೇಕು ಎಂದು ಮಾಜಿ‌ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.ಬಸನಗೌಡ ಪಾಟೀಲ್ ಯತ್ನಾಳ್​ ಹೇಳಿಕೆಗೆ ಪ್ರತಿಕ್ರಿಯಿಸಿ, ಯತ್ನಾಳ್​ ಬಿಜೆಪಿ ಶಾಸಕರು, ಮಾಜಿ ಕೇಂದ್ರ ಸಚಿವರು.

ಮುಖ್ಯಮಂತ್ರಿಯಾಗಲು ದೆಹಲಿಯವರಿಗೆ 2,500 ಕೋಟಿ ಕೊಡಬೇಕೆಂದು ಹೇಳಿದ್ದಾರೆ. ನಾನು ಎಲ್ಲಿಂದ ತರಲಿ, ಅದಕ್ಕೆ ಸಿಎಂ ಆಗಲಿಲ್ಲ ಎಂದಿದ್ದಾರೆ. ಹಾಗಾದ್ರೆ, ಯತ್ನಾಳ್​ಗೆ ಯಾರು ಹೇಳಿದ್ರು, ಸಿಎಂ ಬೊಮ್ಮಾಯಿ ಎಷ್ಟು ದುಡ್ಡು ಕೊಟ್ಟಿದ್ದಾರೆ ಅನ್ನೋದು ರಾಜ್ಯದ ಜನರಿಗೆ ಗೊತ್ತಾಗಬೇಕಿದೆ.ಇದು ಹಗರಣಗಳ‌ ಸರ್ಕಾರ. ನಾನು ಇಷ್ಟೊಂದು ಭ್ರಷ್ಟಾಚಾರದ ಸರ್ಕಾರ ನೋಡಿಲ್ಲ. ಎಲ್ಲಾ ಇಲಾಖೆಯಲ್ಲಿ ಭ್ರಷ್ಟಾಚಾರವಿದೆ. ಈ ಸರ್ಕಾರ 40 ಪರ್ಸೆಂಟ್ ಸರ್ಕಾರ ಆಗಿದೆ ಎಂದರು.

Related