ಕಾಂಗ್ರೆಸಿಗರಿಗೆ ಅತ್ಯುತ್ತಮ ಪ್ರಶಸ್ತಿ ಕೊಡಬೇಕು – ಡಿಸಿಎಂ

ಕಾಂಗ್ರೆಸಿಗರಿಗೆ ಅತ್ಯುತ್ತಮ ಪ್ರಶಸ್ತಿ ಕೊಡಬೇಕು – ಡಿಸಿಎಂ

ಬೆಳಗಾವಿ : ಸುಳ್ಳು ಆರೋಪ ಮಾಡುತ್ತಿರುವ ಕಾಂಗ್ರೆಸಿಗರಿಗೆ ಜಾಗತಿಕ ಮಟ್ಟದ ಅತ್ಯುತ್ತಮ ಪ್ರಶಸ್ತಿ ಕೊಡಬೇಕು ಎಂದು ಡಿಸಿಎಂ ಲಕ್ಷ್ಮಣ್ ಸವದಿ ಅವರು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿ, ಸುಳ್ಳು ಆರೋಪ ಮಾಡುವ ಕಾಂಗ್ರೆಸ್ಸಿಗೆ ವಿಶ್ವದ ಶ್ರೇಷ್ಠ ಪ್ರಶಸ್ತಿ ಹುಡುಕುತ್ತಿದ್ದೇವೆ. ಸುಳ್ಳು ಹೇಳಿಕೆ, ಅನಾವಶ್ಯಕ ಆರೋಪಕ್ಕೆ ಕಾಂಗ್ರೆಸಿಗರಿಗೆ ಶ್ರೇಷ್ಠ ಪ್ರಶಸ್ತಿ ನೀಡಬೇಕಿದೆ. ಪ್ರಶಸ್ತಿ ನೀಡುವ ಚಿಂತನೆ ನಡೆದಿದೆ, ಶಿಫಾರಸನ್ನು ನಾವೇ ಮಾಡುತ್ತೇವೆ ಎಂದರು.

ಇನ್ನು ಅತಿವೃಷ್ಟಿಗೆ, ಅನಾವೃಷ್ಟಿಗೆ ಬಿಜೆಪಿನೇ ಕಾರಣ ಎಂದು ಕಾಂಗ್ರೆಸಿನವರು ಹೇಳುತ್ತಾರೆ. ನದಿ ಬಂದರೂ, ಬರದಿದ್ದರೂ, ಗಾಳಿ ಬಿಟ್ಟರೆ, ಬಿಡದಿದ್ದರೆ ಬಿಜೆಪಿಯೇ ಕಾರಣ ಎಂದು ಆರೋಪಿಸುತ್ತಾರೆ.

ಸುಳ್ಳು ಹೇಳುವುದನ್ನು ಕಾಂಗ್ರೆಸ್ ನಾಯಕರು ಮೈಗೂಡಿಸಿಕೊಂಡಂತೆ ಕಾಣುತ್ತಿದೆ. ಕೊರೋನಾ ವಿಶ್ವದಲ್ಲಿರುವ ಕಾರಣಕ್ಕೆ ಈ ವಿಚಾರದಲ್ಲಿ ನಮ್ಮನ್ನು ಅವರು ಟೀಕಿಸಿಲ್ಲ. ಇಲ್ಲಂದ್ರೆ ದೇಶಕ್ಕೆ ಕೊರೊನಾ ತರಲಿಕ್ಕೆ ಬಿಜೆಪಿನೇ ಕಾರಣ ಎನ್ನುತ್ತಿದ್ದರು. ಆದರೂ ಕೊರೊನಾ ವಿಚಾರದಲ್ಲಿಯೂ ಕಾಂಗ್ರೆಸ್ ನಾಯಕರು ನಮ್ಮನ್ನು ಟೀಕಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Related