ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಬೋಗಸ್ ಭರವಸೆ ನೀಡಿದೆ: ರೇಣುಕಾಚಾರ್ಯ!

ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಬೋಗಸ್ ಭರವಸೆ ನೀಡಿದೆ: ರೇಣುಕಾಚಾರ್ಯ!

ಬೆಂಗಳೂರು: 2023ನೇ ಸಾಲಿನಲ್ಲಿ ನಡೆದ ವಿಧಾನಸಭಾ ಚುನಾವಣೆಗೂ ಮುನ್ನ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು 5 ಗ್ಯಾರೆಂಟಿ ನೀಡಿತ್ತು. ಆದರೆ ಈಗ ಆ ಗ್ಯಾರಂಟಿಗಳೆಲ್ಲ ಬೋಗಸ್ ಗ್ಯಾರಂಟಿಗಳಾಗಿವೆ ಎಂದು ರೇಣುಕಾಚಾರ್ಯ ಅವರು ಟೀಕಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡುತ್ತಿದೆ. 10 ಕೆಜಿ ಅಕ್ಕಿ ಕೊಡುತ್ತೇನೆಂದು ಕೇವಲ ಈಗ 5 ಕೆಜಿ ಅಕ್ಕಿ ಕೊಡುವುದರ ಮೂಲಕ ಬಡ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ಕಾಂಗ್ರೇಸ್ ಸರ್ಕಾರ 10 ಅಕ್ಕಿಯನ್ನು ಜನರಿಗೆ ನೀಡುತ್ತೇವೆ ಎಂದು ಹೇಳಿದ್ದರು. ಆದರೆ ಕೇವಲ 5 ಕೆ.ಜಿ ಅಕ್ಕಿ ಹಾಗೂ 174ರೂಪಾಯಿಗಳನ್ನು ನೀಡಿದ್ದಾರೆ. ಗೃಹಲಕ್ಷ್ಮೀಗೆ ಶೇ 60ರಷ್ಟು ಮಹಿಳೆಯರಿಗೆ ಯೋಜನೆಯ ಸದುಪಯೋಗವೇ ಆಗಿಲ್ಲ. ಯುವನಿಧಿ ಯೋಜನೆಯಿಂದ 5 ಲಕ್ಷ ಯುವಕರಿಗೆ ನೀಡುತ್ತೇವೆ ಎಂದು ಹೇಳಿದ್ದರು. ಆದರೆ ಕೇವಲ 3,5000 ಯುವಕರಿಂದ ಮಾತ್ರ ನೊಂದಣಿಯಾಗಿದೆ.ಈ ಯೋಜನೆಯೂ ಕೂಡ ಫೇಲ್​ ಆಗಿದೆ ಎಂದು ಹೇಳಿದರು.

 

Related