ಇವರಿಗೆ ಮತ ಹಾಕಿದ್ರೆ ದೇಶ, ರಾಜ್ಯ ಹಾಳಾಗುತ್ತೆ : ಬಿಜೆಪಿ ವಿರುದ್ಧ ಸಿದ್ದು ಕಿಡಿ

ಇವರಿಗೆ ಮತ ಹಾಕಿದ್ರೆ ದೇಶ, ರಾಜ್ಯ ಹಾಳಾಗುತ್ತೆ : ಬಿಜೆಪಿ ವಿರುದ್ಧ ಸಿದ್ದು ಕಿಡಿ

ಬೆಳಗಾವಿ : ದೇಶ ಉಳಿಸುವುದು, ರಾಜ್ಯ ಉಳಿಸುವುದು ಮತದಾರರ ಕೈಯಲ್ಲಿದೆ.  ಪ್ರಧಾನಿ ಮೋದಿ, ಬಸವರಾಜ ಬೊಮ್ಮಾಯಿ ಅವರು ಏನು ಕಡಿದು ಕಟ್ಟೆ ಹಾಕಿದ್ದಾರೆ ಅಂತಾ ಹೇಳಲಿ. ಅದರ ಬದಲು ಎಲ್ಲವನ್ನೂ ಮುಚ್ಚಿಕೊಳ್ಳಲು ಧಾರ್ಮಿಕ ವಿಚಾರ ತರುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.

ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ದಿನದಿಂದ ದೇಶ ಇಪ್ಪತ್ತು ವರ್ಷ ಹಿಂದಕ್ಕೆ ಹೋಗಿದೆ. ರಾಜ್ಯ ಹತ್ತು ವರ್ಷ ಹಿಂದಕ್ಕೆ ಹೋಗಿದೆ ಎನ್ನುವ ಮಾಹಿತಿ ಇದೆ. ಈ ಚುನಾವಣೆ ಮುಂದಿನ ವಿಧಾನಸಭೆ ಚುನಾವಣೆ ದಿಕ್ಸೂಚಿ ಎಂದರು.

ಇನ್ನು ಕೇಂದ್ರ ಸರ್ಕಾರದ ಬಗ್ಗೆ ನಾನು ಕೊಡುವ ಅಂಕಿ ಅಂಶಗಳು ತಪ್ಪಿದ್ದರೆ, ಬನ್ನಿ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ. ಇಂತವರಿಗೆ ಮತ ಹಾಕಿದರೆ ದೇಶ ಹಾಳಾಗುತ್ತದೆ. ಸಂವಿಧಾನದ ಆಶಯಗಳನ್ನು ಈಡೇರಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಇದೆ. ಸಂವಿಧಾನದ ಆಶಯಗಳಿಗೆ ವಿರೋಧ ಇದ್ದವರು ದೇಶದ್ರೋಹಿಗಳು ಎಂದು ಸಿದ್ದರಾಮಯ್ಯ ಪರೋಕ್ಷವಾಗಿ ಬಿಜೆಪಿಗೆ ದೇಶದ್ರೋಹಿ ಪಕ್ಷ ಎಂದು ಲೇವಡಿ ಮಾಡಿದ್ದಾರೆ.

Related