ಬೆಳಗಾವಿ: ಕಾಡಾನೆ ಸೆರೆಹಿಡಿಯಲು ದಸರಾಹನೆಯಲ್ಲಿ ಪಾಲ್ಗೊಳ್ಳುತ್ತಿದ್ದ ಆನೆ ಅರ್ಜುನ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಇಂದು ಬೆಳಗಾವಿಯಲ್ಲಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಆನೆ ಅರ್ಜುನ ಸಾವಿಗೆ ಒಂದು ನಿಮಿಷಗಳ ಕಾಲ ಮೌನಚರಣೆ ಮಾಡಿ ಮಾಡುವ ಮೂಲಕ ಸಂತಾಪ ಸೂಚಿಸಲಾಯಿತು.
ಅರ್ಜುನ ಆನೆಗೆ ರಾಜ ಮಾರ್ಯದೆ ಕೊಟ್ಟು ಅಂತ್ಯಸಂಸ್ಕಾರ ನಡೆಸಲಾಗುತ್ತಿದೆ. ಮೃತಪಟ್ಟ ಮೇಲೆ ಅರಣ್ಯ ಇಲಾಖೆ ಅರ್ಜುನ ಆನೆಯ ಬಗ್ಗೆ ಸಹಾನುಭೂತಿಯಿಂದ ವರ್ತಿಸುತ್ತಿದೆ.
2012 ರಿಂದ 2018 ರವರೆಗೆ ದಸರಾ ಅಂಬಾರಿ ಹೊತ್ತು ನಡೆದಿದ್ದು, ಆ ಮೇಲೆ ವಯಸ್ಸಿನ ಕಾರಣಕ್ಕಾಗಿ ಆ ಜವಾಬ್ದಾರಿಯನ್ನು ಅಭಿಮನ್ಯುಗೆ ಹಸ್ತಾಂತರಿಸಾಗಿತ್ತು. ಮೈಸೂರಿನ ಜನರಂತೂ ಅರ್ಜುನನ ದೊಡ್ಡ ಅಭಿಮಾನಿಯಾಗಿದ್ದರು. ಹೀಗಾಗಿಯೇ ದಸರಾದ ಜಂಬೂ ಸವಾರಿಯಲ್ಲಿ ಮೊನ್ನೆ ಮೊನ್ನೆವರೆಗೆ ಅರ್ಜುನ ಹೆಜ್ಜೆ ಹಾಕಿದ್ದನು. ಅಷ್ಟೇ ಅಲ್ಲ, ಅರ್ಜುನ ಯಾವುದೇ ಭಯವಿಲ್ಲದೆ ಹುಲಿಯೇ ಆಗಿರಲಿ, ಅದೆಂತಹಾ ಕಾಡನೆಯೇ ಆಗಿರಲ್ಲಿ ಅದನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಗೆ ಭಾರೀ ಫೇವರ್ ಆಗಿದ್ದ.