ತಹಶೀಲ್ದಾರ್ ಹತ್ಯೆ ಖಂಡನೆ

  • In State
  • July 10, 2020
  • 511 Views
ತಹಶೀಲ್ದಾರ್ ಹತ್ಯೆ  ಖಂಡನೆ

ಮುಂಡಗೋಡ: ಬಂಗಾರಪೇಟೆ ತಹಸೀಲ್ದಾರ್ ಬಿ.ಕೆ.ಚಂದ್ರಮೌವಳೆಶ್ವರ ಹತ್ಯೆ ಖಂಡಿಸಿ ವಿವಿಧ ಸರಕಾರಿ ನೌಕರರ ಸಂಘಟನೆಯವರು ಸಹಾಯಕ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ಬಂಗಾರಪೇಟೆಯ ತಹಸೀಲ್ದಾರ್ ಬಿ.ಕೆ.ಚಂದ್ರಮೌಳೆಶ್ವರ ಅವರು ಕರ್ತವ್ಯದ ಮೇಲೆ ಹೋದಾಗ ವೆಂಕಟಪತಿ ಎಂಬವರು ತಹಸೀಲ್ದಾರ್‌ಗೆ ಚಾಕುವಿನಿಂದ ಇರಿದು ಹತ್ಯಗೈದಿ ರುವುದು ರಾಜ್ಯ ಸರಕಾರಿ ನೌಕರರ ಸಂಘ ತೀವೃವಾಗಗಿ ಖಂಡಿಸುತ್ತದೆ ಇಂತಹ ಘಟನೆಗಳು ಆಗಾಗ ನಡೆಯುತ್ತಲಿದ್ದು ಇಂತಹ ಕೃತ್ಯೆ ಎಸಗಿದ ವ್ಯಕ್ತಿಗೆ ಕಠಿಣ ಶಿಕ್ಷೆ ನೀಡಬೇಕು, ಹಾಗೂ ನೌಕರರು ಯಾವೂದೆ ಭಯವಿಲ್ಲದೆ ಕಾರ್ಯನಿರ್ವಹಿಸುವಂತಾಗಬೇಕು, ಮೃತರ ಕುಟುಂಬಕ್ಕೆ ಸರಕಾರದಿಂದ ಗರಿಷ್ಠ ಪರಿಹಾರ ನೀಡಬೇಕು ಮೃತರ ಕುಟುಂಬದವರಿಗೆ ಅನುಕಂಪ ಆಧಾರದ ನೇಮಕಾತಿ ನೀಡಬೇಕು, ಹಾಗೂ ಕುಟುಂಬದವರಿಗೆ ಸರಕಾರಿ ಸೌಲಭ್ಯಗಳನ್ನು ಒದಗಿಸುವಂತೆ ಅವರು ನೀಡದ ಮನವಿಯಲ್ಲಿ ತಿಳಿಸಿದ್ದಾರೆ ಅದರಂತೆ ಕಂದಾಯ ಇಲಾಖೆ ಹಾಗೂ ಸರ್ವೆ ಇಲಾಖೆಯವರು ಮನವಿ ಸಲ್ಲಿಸಿದರು.

 

Related