ಕರ್ಫ್ಯೂ ಜಾರಿ ಮಾಡುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲ

  • In State
  • April 5, 2020
  • 509 Views
ಕರ್ಫ್ಯೂ ಜಾರಿ ಮಾಡುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲ

ರಾಯಚೂರು, ಏ. 05: ಕೊರೋನಾ ಮಹಾ-ಮಾರಿಗೆ ದೇಶವೇ ಲಾಕ್ ಡೌನ್ ಆಗಿದೆ, ಇದರ ಮಧ್ಯೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೊರೋನಾ ಸೋಂಕಿಗೆ ಕಡಿವಾಣ ಹಾಕಬೇಕಿದ್ದ ಜನರು 144 ಸೆಕ್ಷನ್‌ಗೂ, ನಮಗೂ ಯಾವುದೇ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ದಿನಸಿ ಖರೀದಿಗೆ ಮುಂದಾಗಿದ್ದಾರೆ.

ಜಿಲ್ಲೆಯ ಯರಗೇರಾದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ತರಕರಿ ಮತ್ತು ಕಿರಾಣಿ ಅಂಗಡಿಗಳ ದಿನಸಿ ಖರೀದಿಸಲು ಮುಗಿಬಿದ್ದಿದ್ದಾರೆ. ಆಂದ್ರಪ್ರದೇಶದ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಯರಗೇರಾ ಗ್ರಾಮದ ಜನರಂತೂ ಅನಗತ್ಯವಾಗಿ ಹೊರಗಡೆ ಬರಲೇ ಬಾರದು. ಇಂತಹ ಸಂದರ್ಭದಲ್ಲಿ ದಿನಸಿ ಖರೀದಿಗೆ ಗುಂಪು-ಗುಂಪಾಗಿ ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದನ್ನು ಗಮನಿಸಿದರೆ. ನಿಜಕ್ಕೂ ನಿಷೇಧಾಜ್ಞೆಯ ಬಿಸಿ ಇವರಿಗೆ ತಟ್ಟಿಲ್ಲ ಎನ್ನುವಂತಿದೆ.

ಇದನ್ನೇಲ್ಲ ಗಮನಿಸದರೆ ಜಿಲ್ಲಾಢಳಿತ ಮತ್ತು ಪೊಲೀಸ್ ಇಲಾಖೆ ಅಗತ್ಯ ಇರುವ ಕಡೆಗೆ ಕರ್ತವ್ಯ ನಿರ್ವಹಿಸಲು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

 

Related