ಡಿಬಿ ಚಂದ್ರೇಗೌಡರಿಗೆ ಅಂತಿಮ ನಮನ ಸಲ್ಲಿಸಿದ ಸಿಎಂ

ಡಿಬಿ ಚಂದ್ರೇಗೌಡರಿಗೆ ಅಂತಿಮ ನಮನ ಸಲ್ಲಿಸಿದ ಸಿಎಂ

ಚಿಕ್ಕಮಗಳೂರು: ಮಾಜಿ ಸಚಿವ, ಹಿರಿಯ ರಾಜಕಾರಣಿ ಡಿಬಿ ಚಂದ್ರೇಗೌಡ ಅವರು ನಿನ್ನೆ ಕೊನೆಯುಸಿರೆಳೆದರು. ಇಂದು ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮದಲ್ಲಿ ಅವರ ಅಂತಿಮ ಅಂತಿಮ ಸಂಸ್ಕಾರ ನಡೆದಿದ್ದು, ಮಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಂದ್ರೇಗೌಡ ಅವರಿಗೆ ಅಂತಿಮ ನಮನ ಸಲ್ಲಿಸಿದರು ಈ ದರ್ಭದಲ್ಲಿ ಜಿಲ್ಲೆಯ ಐದು ಮಂದಿ ಕಾಂಗ್ರೆಸ್ ಶಾಸಕರು ಸಾಥ್ ನೀಡಿದರು.

ಜನತಾ ಪಾರ್ಟಿಯ ಸದಸ್ಯರಾಗಿದ್ದಾಗ ಸಿದ್ದರಾಮಯ್ಯ ಮತ್ತು ಚಂದ್ರೇಗೌಡ ನಡುವೆ ಬೆಳೆದ ಗೆಳೆತನ, ಸಲುಗೆ, ಆತ್ಮೀಯತೆ ಕೊನೆಯವರೆಗೂ ಇತ್ತು. ಚಂದ್ರೇಗೌಡರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸುವಾಗ ಸಿದ್ದರಾಮಯ್ಯ ಭಾವುಕರಾದರು. ಚಂದ್ರೇಗೌಡರ ದೇಹವಿದ್ದ ಪೆಟ್ಟಿಗೆ ಮೇಲೆ ಹೂಮಾಲೆ ಹಾಕಿದ ಬಳಿಕ ಸಿದ್ದರಾಮಯ್ಯ ಪಾರ್ಥೀವ ಶರೀರಕ್ಕೆ ಪೂಜೆ ಮಾಡುತ್ತಾರೆ.

ಪೂಜೆ ಮಾಡುವ ಮೊದಲು ಮತ್ತು ಮಾಡುವಾಗಲೂ ಸಿದ್ದರಾಮಯ್ಯ ಗತಿಸಿದ ನಾಯಕನ ಮುಖವನ್ನು ತದೇಕದೃಷ್ಟಿಯಿಂದ ನೋಡುತ್ತಾರೆ. ಸಿದ್ದರಾಮಯ್ಯ ಮತ್ತು ಚಂದ್ರೇಗೌಡ ಸಮಕಾಲೀನರಾದರೂ ದಿವಂಗತರು ಮುಖ್ಯಮಂತ್ರಿಯವರಿಗಿಂತ ಸುಮಾರು ಹತ್ತು ವರ್ಷಗಳಷ್ಟು ದೊಡ್ಡವರು. ಅಂತಿಮ ನಮನ ಸಲ್ಲಿಸಿದ ಬಳಿಕ ಸಿದ್ದರಾಮಯ್ಯ ಚಂದ್ರೇಗೌಡರ ಪತ್ನಿ, ಪುತ್ರಿಯರು ಹಾಗೂ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

Related