ತುರ್ತುಸಭೆ ಕರೆದ ಸಿಎಂ

ತುರ್ತುಸಭೆ ಕರೆದ ಸಿಎಂ

ಬೆಂಗಳೂರು : ಸಾರ್ವಜನಿಕರಲ್ಲಿ ಕರ್ನಾಟಕ ಮತ್ತೆ ಲಾಕ್? ಆಗುತ್ತಾ ಎಂಬ ಪ್ರಶ್ನೆ ಕಾಡುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಜು.6ರಂದು ಸಂಜೆ 4 ಗಂಟೆಗೆ ಬಿಜೆಪಿ ಶಾಸಕರು ಮತ್ತು ಸಂಸದರ ತುರ್ತುಸಭೆ ಕರೆದಿದ್ದಾರೆ.

ಸಭೆಯಲ್ಲಿ ಮತ್ತೆ ಲಾಕ್ ಡೌನ್ ಅವಶ್ಯಕತೆಯಿದೆಯೇ ಅಥವಾ ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಬೇಕೆ ಎಂಬ ಬಗ್ಗೆ ಸಮಾಲೋಚನೆ ನಡೆಯಲಿದೆ.

ಮಹಾಮಾರಿ ಕೋರೋನಾ ವಿರುದ್ಧ ಹೋರಾಟ ಸಂಬಂಧ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಕಳೆದ ಜೂ.26 ರಂದು ಕೂಡ ಸಿಎಂ ಸಭೆ ಕರೆದಿದ್ದರು, ಆದರೆ ಈ ಬಾರಿ ಕೇವಲ ಬಿಜೆಪಿ ಶಾಸಕರು ಮತ್ತು ಸಂಸದರು ಮಾತ್ರ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

ಈ ಮೊದಲು ತಮ್ಮ ಕ್ಷೇತ್ರದಲ್ಲಿ ಒಂದೊ ಎರಡೋ ಕೊರೋನಾ ಕೇಸ್ಗಳು ಇತ್ತು, ಆದರೆ ಇತ್ತೀಚೆಗೆ ದಿನಕ್ಕೆ 12-15 ಪ್ರಕರಣಗಳು ದಾಖಲಾಗುತ್ತಿವೆ.

Related