ಚೀನಾ ವಸ್ತು ಬಳಸದಂತೆ ಪ್ರತಿಜ್ಞೆ

ಚೀನಾ ವಸ್ತು ಬಳಸದಂತೆ ಪ್ರತಿಜ್ಞೆ

ಕಾಗವಾಡ: ಭಾರತ ದೇಶದ ಸೈನಿಕರು ದೇಶದ ರಕ್ಷಣೆಗಾಗಿ ಹುತಾತ್ಮರಾಗಿದ್ದಾರೆ.  ನಮ್ಮ ಮೇಲೆ ದಾಳಿ ಮಾಡುವ ಚೀನಾ ವಸ್ತುಗಳ ನಾವು ಬಳಸುವುದಿಲ್ಲ ಎಂದು ಉಗಾರ ಖುರ್ದ ಪುರಸಭೆ ಸದಸ್ಯ ಪ್ರಫೂಲ್ ಥೋರುಶೆ, ನಿವೃತ್ತ ಕ್ಯಾಪ್ಟನ್ ನಾಮದೇವ ಖರಾಡೆ ಮುಂದಾಳತ್ವದಲ್ಲಿ ಪ್ರತಿಜ್ಞೆ ಮಾಡಿದರು.

ಉಗಾರ ಖುರ್ದ ಪರಸಪ್ಪಾ ವೃತ್ತದಲ್ಲಿ ಉಗಾರದ ದೇಶಭಕ್ತ ಯುವಕರು ಚೀನಾ ದೇಶದ ವಿರುದ್ಧ ಪ್ರತಿಭಟನೆ ಕೈಗೊಂಡರು.

ದೇಶದ ಪ್ರಧಾನಿ ನರೇಂದ್ರ ಮೋದಿ ದೇಶದ ಸೈನಿಕರಿಗೆ ಸಂಪೂರ್ಣ ಅಧಿಕಾರ ನೀಡಿದ್ದಾರೆ. ನಮ್ಮ ಸೈನಿಕರು ಚೀನಾ ಸೈನಿಕರನ್ನು ಬಗ್ಗು ಬಡಿಯಲಿದ್ದಾರೆ. ನಾವೆಲ್ಲರೂ ದೇಶದ ಸೈನಿಕರೊಂದಿಗಿದ್ದೇವೆ ಎಂದು ಪ್ರಫೂಲ್‍ ಥೋರುಶೆ, ಪ್ರತಾಪ ಜತ್ರಾಟೆ ಹೇಳಿದರು.

ದೇಶ ಸೇವೆ ಕೊನೆಗೊಳಿಸಿ ನಿವೃತ್ತ ಕ್ಯಾಪ್ಟನ್ ನಾಮದೇವ ಖರಾಡೆ ಮಾತನಾಡಿ, ಮರಾಠಾ ಚೀನಾ ನಮ್ಮ ಶತ್ರು ರಾಷ್ಟ್ರವಾಗಿದೆ. ಇಂತಹ ರಾಷ್ಟ್ರಕ್ಕೆ ಧಿಕ್ಕಾರ ಹೇಳುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತೇನೆ ಎಂದರು.

ಉಗಾರ ಪುರಸಭೆ ಸದಸ್ಯ ಅವಿನಾಶ ಮೋರೆ, ಪ್ರತಾಪ ಜತ್ರಾಟೆ, ಅಕ್ಬರ್ ನದಾಫ್, ಚಿಂತಾಮಣಿ ಜೋಶಿ, ಸಂಜಯ ಶಿಂಧೆ, ಸಚಿನಜಾಧವ, ಯೊಗೇಶಕಾಮೇರಿ, ಕಿರಣಜಾಧವ, ಸಂಜಯ ಪವಾರ, ವಿಜಯಥೋರುಶೆ, ಅಜಯ ಕಾಂಬಳೆ, ಸೇರಿದಂತೆ ಅನೇಕರು ಇದ್ದರು.

Related