ರಾಜ್ಯ ಸರ್ಕಾರದಿಂದ ‘ದೀಪಾವಳಿಗೆ ಬಂಫರ್ ಗಿಫ್ಟ್’

ರಾಜ್ಯ ಸರ್ಕಾರದಿಂದ ‘ದೀಪಾವಳಿಗೆ ಬಂಫರ್ ಗಿಫ್ಟ್’

ಬೆಂಗಳೂರು : ಮಧ್ಯ ಕರ್ನಾಟಕದ ಬಯಲು ಸೀಮೆಯ ಜಿಲ್ಲೆ, ಚಿತ್ರದುರ್ಗ. ಇಂತಹ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಮೆಡಿಕಲ್ ಕಾಲೇಜು ನಮ್ಮ ಜಿಲ್ಲೆಯಲ್ಲೂ ನಿರ್ಮಾಣವಾಗಬೇಕು ಎಂಬುದಾಗಿತ್ತು. ಈ ಕನಸು ಇದೀಗ ಈಡೇರುತ್ತಿದೆ.

ಇಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಈ ಮೂಲಕ ಚಿತ್ರದುರ್ಗದ ಜನರಿಗೆ ರಾಜ್ಯ ಸರ್ಕಾರದಿಂದ ದೀಪಾವಳಿ ಬಂಫರ್ ಗಿಫ್ಟ್ ನೀಡಿದೆ.

ವಿವಿಧ ಯೋಜನೆಗಳಿಗೆ ಅನುಮೋದನೆ ಸೇರಿದಂತೆ ಸುಮಾರು 66 ವಿಷಯಗಳ ಕುರಿತಂತೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ, ಒಪ್ಪಿಗೆಯನ್ನು ಸೂಚಿಸಲಿದೆ.

ಇದೀಗ ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸಿಎಂ ಯಡಿಯೂರಪ್ಪ ನೇತೃತ್ವದ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಿದೆ. ಈ ಮೂಲಕ ಚಿತ್ರದುರ್ಗದ ಜನರಿಗೆ ದೀಪಾವಳಿ ಉಡುಗೋರೆಯನ್ನು ರಾಜ್ಯ ಸರ್ಕಾರ ನೀಡಿದೆ. ಜೊತೆಗೆ 60 ಕೋಟಿ ಅನುದಾನ ರಿಲೀಸ್ ಗೆ ಸಿಎಂ ಸೂಚನೆ ನೀಡಿದ್ದಾರೆ.

Related