ಕೊಲ್ಹಾರ: ಅಕ್ರಮ ಚಟುವಟಿಕೆಗಳನ್ನು ತಡೆಯಲು ಪ್ಯಾಂತರ್ ವತಿಯಿಂದ ಕೊಲ್ಹಾರ ತಾಲೂಕು ದಂಡಾಧಿಕಾರಿಗಳಿಗೆ ಉಪ ತಹಶೀಲ್ದಾರರ ಮೂಲಕ ಸೋವವಾರದಂದು ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಮಾತನಾಡಿ ” ದಲಿತ ಕಾಲೋನಿಯಲ್ಲಿ ವೇಶ್ಯಾವಾಟಿಕೆ, ಹಳ್ಳಿಗಳಲ್ಲಿ ಅಕ್ರಮ ಮರಳು ಸಾಗಾಣಿಕೆ, ಕಳ್ಳಭಟ್ಟಿ ಸಾರಾಯಿ, ತಂಪುಪಾನೀಯ ಅಂಗಡಿಗಳಲ್ಲಿ ಸರ್ಕಾರಿ ಸಾರಾಯಿಯನ್ನು ಬೆಳಿಗ್ಗೆ 6 ಗಂಟೆಗೆ ಮಾರಾಟಮಾಡಲಾಗುತ್ತಿದ್ದು ಹಳ್ಳಿಗಳಲ್ಲಿ ಇಸ್ಪಿಟ್ ಆಟ, ಮಟ್ಕಾ ನಡೆಯುತ್ತಿದೆ. ಸೆ.02 ರಂದು ಬೃಹತ್ ಪ್ರತಿಭಟನೆ ಮಾಡುತ್ತೇವೆಂದು ಜಿಲ್ಲಾಧ್ಯಕ್ಷ ಸಿಡ್ಲಪ್ಪ ಆರ್ ಮಾದರ್ ಹೇಳಿದರು.
ಬೆಳಗಾವಿ ವಿಭಾಗೀಯ ಅಧ್ಯಕ್ಷ ಶ್ರೀಶೈಲ್ ಚಲವಾದಿ, ಅಧ್ಯಕ್ಷರಾದ ಬಸವರಾಜ ಛಲವಾದಿ, ದಲಿತ ಮುಖಂಡರಾದ ಬಸಪ್ಪ ಬ್ಯಾಲ್ಯಾಳ, ದಶರಥ್ ಈಟಿ, ರಾಜು ,ಶಿಡ್ಲಪ್ಪ ತಳಗೇರಿ ತಿಪ್ಪಣ್ಣ, ಪ್ರಕಾಶ್ ಮೇತ್ರಿ, ಮಲ್ಲಪ್ಪ ಕುದರಿ, ಮಲ್ಲಪ್ಪ ಪೂಜೇರಿ ಉಪಸ್ಥಿತರಿದ್ದರು.