ಬೊಮ್ಮನಹಳ್ಳಿ ಬಿಜೆಪಿಯ ಭದ್ರಕೋಟೆ: ಸತೀಶ್ ರೆಡ್ಡಿ

ಬೊಮ್ಮನಹಳ್ಳಿ ಬಿಜೆಪಿಯ ಭದ್ರಕೋಟೆ: ಸತೀಶ್ ರೆಡ್ಡಿ

ಬೊಮ್ಮನಹಳ್ಳಿ: ಕೊರೋನಾ ವೇಳೆ ಜನತೆಗೆ ಅಕ್ಕಿ, ಬೇಳೆ, ಎಣ್ಣೆ, ದಿನಸಿ ಕೊಟ್ಟಿದ್ದೇವೆ. ಆದರೆ ಕಾಂಗ್ರೆಸ್‌ನವರು ಅಂದು ಅವರ ಕುಟುಂಬದವರನ್ನು ನೋಡಿಕೊಳ್ಳುತ್ತಿದ್ದರೆಂದು ಸತೀಶ್ ರೆಡ್ಡಿ ನುಡಿದರು.

ಬೊಮ್ಮನಹಳ್ಳಿಯ ಭಾನು ನರ್ಸಿಂಗ್ ಹೋಂ ಬಳಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಯುವಕರು ಇಂದು ಬಿಜೆಪಿಗೆ ಸೇರ್ಪಡೆಗೊಂಡರು. ಈ ವೇಳೆ ಪಕ್ಷದ ಶಾಲನ್ನು ಹೊದಿಸಿ ಬರಮಾಡಿಕೊಂಡ ಶಾಸಕ ಸತೀಶ್ ರೆಡ್ಡಿಯವರು ಸುಮಾರು 3 ದಶಕದಿಂದಲೂ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಬಲವರ್ಧನೆಗೊಳಿಸಿದ್ದೇನೆ. ಇದು ಬಿಜೆಪಿ ಭದ್ರಕೋಟೆ. ಕಾಂಗ್ರೆಸ್‌ನ್ನು ಜನ ನಂಬುವುದಿಲ್ಲವೆಂದರು. 50 ಸಾವಿರ ಕೋಟಿ ವೆಚ್ಚದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಜನತೆಗೆ ಲಭ್ಯವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಬಿ.ಎಸ್. ಮಂಜುನಾಥ ರೆಡ್ಡಿ, ಮಾಜಿ ನಗರಸಭಾ ಸದಸ್ಯ ಚಂದ್ರಶೇಖರ್ ರೆಡ್ಡಿ, ನರೇಂದ್ರ ಬಾಬು, ಅನಿಲ್ ಕುಮಾರ್, ಬಾಬು ಮುಂತಾದವರು ಭಾಗವಹಿಸಿದ್ದರು.

Related