ರಕ್ತ ಕಾರಿ ಪ್ರಾಣಬಿಟ್ಟ ಹಸುಗಳು

ರಕ್ತ ಕಾರಿ ಪ್ರಾಣಬಿಟ್ಟ ಹಸುಗಳು

ಸಕಲೇಶಪುರ : ಗೋವುಗಳಿಗೆ ಆಹಾರದ ಮೂಲಕ ವಿಷಪಾಶನ ಮಾಡಿ ಕೊಂದಿರುವ ಅಮಾನವೀಯ ಘಟನೆ ತಾಲೂಕಿನ ಕುನಿಗನಹಳ್ಳಿಯಲ್ಲಿ ನಡೆದ ಘಟನೆ.

ವ್ಯಾಪ್ತಿಯ ಹೆಗ್ಗಾವೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು. ಎಂದಿನಂತೆ ಗ್ರಾಮಸ್ಥರು ಹಸುಗಳನ್ನು ಮೇಯಲು ಸೋಮವಾರ ಬೆಳಗ್ಗೆ ಹೊರಗಡೆ ಬಿಟ್ಟಿದ್ದರು. ಆದರೆ ಸಂಜೆ ಕತ್ತಲಾಗುವುದರೊಳಗೆ ಮರಳಿ ಬರುತ್ತಿದ್ದ ಹಸುಗಳು, ಕೆಲ ಹೊತ್ತಾದರು ಬರಲೇ ಹೋಗಿದ್ದ ಕಾರಣ.

ಚಿರತೆ ಕಾಟವೂ ಇದ್ದರಿಂದ ಏನೋ ಅನಾಹುತವಾಗಿರಬಹುದು ಎಂದು ಗ್ರಾಮಸ್ಥರು ಹುಡುಕಲು ಹೋದವರಿಗೆ ಅಲ್ಲಿ ಉಬ್ಬರಿಸಿಕೊಂಡು ಸತ್ತು ಬಿದ್ದಿದ್ದ ಎರಡು ಗೋವುಗಳು ಕಾಣಿಸಿವೆ.

ಅಲ್ಲದೇ ಕಾಫಿ ತೋಟದಲ್ಲಿ ಗೋವುಗಳು ತಿಂದಿದ್ದ ಹಲಸಿನ ಹಣ್ಣುಗಳು ಕಾಣಿಸಿವೆ.ಇದಾದ ನಂತರ ಮರಳಿ ಬಂದಿದ್ದ ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿದ್ದವರಿಗು ಶಾಕ್ ಕಾದಿತ್ತು. ಕಟ್ಟಿದ ಜಾಗದಲ್ಲೇ ಅವು ರಕ್ತ ಕಾರಿಕೊಂಡು ಪ್ರಾಣ ಬಿಟ್ಟಿದ್ದವು.

Related