ತಂತ್ರಜ್ಞಾನ ಆಧಾರಿತ ಅಭಿವೃದ್ಧಿ ಕರ್ನಾಟಕದಿಂದ ಆಗುತ್ತಿದೆ : ಸಿಎಂ

ತಂತ್ರಜ್ಞಾನ ಆಧಾರಿತ ಅಭಿವೃದ್ಧಿ ಕರ್ನಾಟಕದಿಂದ ಆಗುತ್ತಿದೆ : ಸಿಎಂ

ನವದೆಹಲಿ, ಜೂನ್ 16 : ತಂತ್ರಜ್ಞಾನ ಆಧಾರಿತ ಅಭಿವೃದ್ಧಿ ಕರ್ನಾಟಕದಿಂದ ಆಗುತ್ತಿದೆ. ದೇಶದ ಅಭಿವೃದ್ಧಿ ಕರ್ನಾಟಕದ ನೀಡಬಹುದಾದ ಬಹು ದೊಡ್ಡ ಕೊಡಗೆ ಇದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಕರ್ನಾಟಕವನ್ನು ದೇಶದ ಅಭಿವೃದ್ಧಿಯ ಇಂಜಿನ್ ಎಂದು ಗುರುತಿಸಿರುವುದೇ ಕರ್ನಾಟಕದ ಮಹತ್ವವನ್ನು ಸಾರುತ್ತದೆ. ಕರ್ನಾಟಕಕ್ಕೆ ತಂತ್ರಜ್ಞಾನ ಅಭಿವೃದ್ಧಿಯ ಸುದೀರ್ಘ ಇತಿಹಾಸವಿದೆ. ಏರೋಸ್ಪೇಸ್ ರಕ್ಷಣಾ ಹಾಗೂ ಉತ್ಪಾದನಾ ವಲಯದಲ್ಲಿ ಅತಿ ಹೆಚ್ಚಿನ ಸಾರ್ವಜನಿಕ ವಲಯ ಸಂಸ್ಥೆಗಳನ್ನು ಕರ್ನಾಟಕ ಹೊಂದಿದೆ.

ಮೈಸೂರು ಮಹಾರಾಜರು ಸ್ಟೀಲ್, ಸಿಮೆಂಟ್ ನಿಂದ ಹಡಿದು ಶಾಯಿಯವರೆಗೆ ಕೈಗಾರಿಕೆಗಳನ್ನು ಪ್ರಾರಂಭಿಸಿದ್ದರು. ಹಾಗಾಗಿ ಕರ್ನಾಟಕ ಬಹಳ ಹಿಂದಿನಿಂದಲೇ ಕೈಗಾರೀಕರಣದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ವಿಶ್ವದಾದ್ಯಂತ ಬಳಕೆಯಲ್ಲಿದ್ದ ಹೊಸ ತಂತ್ರಜ್ಞಾನವನ್ನು ಬೆಂಗಳೂರಿನಲ್ಲಿ ಪರೀಕ್ಷಿಸಲಾಗುತ್ತಿತ್ತು. ಜೈವಿಕ ತಂತ್ರಜ್ಞಾನ, ಜಿನೋಮ್ಯಾಟಿಕ್ಸ್, ಕೃತಕ ಬುದ್ದಿಮತ್ತೆ ಸೇರಿದಂತೆ ಅತಿ ಹೆಚ್ಚಿನ ಅಂಡ್ ಡಿ ಕೇಂದ್ರಗಳು ಬೆಂಗಳೂರಿನಲ್ಲಿವೆ. ಅತಿ ಹೆಚ್ಚಿನ ಆರ್ ಅಂಡ್ ಡಿ ಕೇಂದ್ರಗಳನ್ನು ಹೊಂದಿರುವ ಏಕೈಕ ರಾಜ್ಯ ಕರ್ನಾಟಕ. ಹೊಸ ಉತ್ಪನ್ನಗಳು, ಅಪ್ಲಿಕೇಷನ್‍ಗಳನ್ನು ಅಭಿವೃದ್ಧಿ ಪಡಿಸಲಾಗಿದೆ. 500 ಫಾರ್ಚೂನ್ ಕಂಪನಿಗಳು ಬೆಂಗಳೂರಿನಲ್ಲಿವೆ. ಕೃಷಿ, ಉತ್ಪಾದನೆ, ಐಟಿ-ಬಿಟಿ, ಡಿ.ಆರ್.ಡಿ.ಒ, ಏರೋಸ್ಪೇಸ್ ಹಾಗೂ ಸ್ಟಾರ್ಟ್ ಅಪ್‍ಗಳಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ ಎಂದರು.

ದೆಹಲಿಯಲ್ಲಿ ರೂಪಿಸಲಾಗುವ ನೀತಿಗಳ ನೇರ ಪರಿಣಾಮ ಕರ್ನಾಟದ ಮೇಲಾಗಲಿದೆ ಡಬಲ್ ಇಂಜಿನ್ ಸರ್ಕಾರದಿಂದ ಆಗುವ ಲಾಭಗಳೇನು ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಡಬಲ್ ಇಂಜಿನ್ ಸರ್ಕಾರದಿಂದ ಖಂಡಿತ ಲಾಭವಿದೆ. ದೆಹಲಿಯ ಬಾಗಿಲು ತೆರೆದಿದ್ದರೆ ಅನೇಕ ಕೆಲಸಗಳು ಸುಲಭವಾಗಿ ಆಗುತ್ತವೆ. ನೀತಿ ನಿರೂಪಣೆ ದೆಹಲಿಯಲ್ಲಿ ಆಗುತ್ತದೆ. ಅಂತರರಾಷ್ಟ್ರೀಯ ಹೆಬ್ಬಾಗಿಲು ದೆಹಲಿಯಲ್ಲಿದ್ದು, ಡಬಲ್ ಇಂಜಿನ್ ಸರ್ಕಾರ ಮಾತ್ರ ಅಂತರರಾಷ್ಟ್ರೀಯ ಮಟ್ಟಕ್ಕೆ ಏರಲು ರಹದಾರಿ ಮಾಡಿಕೊಡಲು ಸಾಧ್ಯವಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕರ್ನಾಟಕ ರಾಜ್ಯದಲ್ಲಿ ಯೂನಿಕಾರ್ನ್‍ಗಳನ್ನು ಆಕರ್ಷಿಸಲು ತೆಗೆದುಕೊಂಡಿರುವ ಕ್ರಮಗಳೇನು ಎಂಬ ಪ್ರಶ್ನೆಗೆ ಉತ್ತರಿಸಿ, ಸ್ಟಾರ್ಟ್‍ಅಪ್‍ಗಳು ಬೆಳೆದು ಯೂನಿಕಾರ್ನ್,ಡೆಕಾಕಾರ್ನ್‍ಗಳಾಗುತ್ತವೆ. ಸಂಸ್ಥೆಗಳ ಸ್ಥಾಪನೆಗೆ ಪೂರಕ ವಾತಾವರಣದ ಅವಶ್ಯಕತೆ ಇದೆ.ಮೋದಿಯವರ ನೀತಿ ಬೆಳವಣಿಗೆಯ ಹೊಸ ರೀತಿಯಾಗಿದೆ. ಕರ್ನಾಟಕದ ಎಕೋ ಸಿಸ್ಟಂ, ಆರ್ ಎಂಡ್ ಡಿ, ಕೌಶಲ್ಯಭರಿತ ಮಾನವ ಸಂಪನ್ಮೂಲಗಳು ಸ್ಟಾರ್ಟ್‍ಅಪ್‍ಗಳ ಸ್ಥಾಪನೆಗೆ ಪೂರಕವಾಗಿದೆ. ರಾಜ್ಯದಲ್ಲಿ ಎಲಿವೇಟ್ ಕಾರ್ಯಕ್ರಮಗಳು, ಮಹಿಳೆಯರು, ಗ್ರಾಮೀಣ ಯುವಜನತೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಕೃಷಿ, ಮೀನುಗಾರಿಕೆ,ಜವಳಿ ಕ್ಷೇತ್ರದಲ್ಲಿಯೂ ಸ್ಟಾರ್ಟಅಪ್ ಗಳಿವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Related