ಬಿಜೆಪಿಯವರಿಗೆ ಆಪರೇಷನ್ ಮಾಡೋ ಹ್ಯಾಬಿಟ್ ಇದೆ: ಶಿವರಾಜ್‌ ತಂಗಡಗಿ!

ಬಿಜೆಪಿಯವರಿಗೆ ಆಪರೇಷನ್ ಮಾಡೋ ಹ್ಯಾಬಿಟ್ ಇದೆ: ಶಿವರಾಜ್‌ ತಂಗಡಗಿ!

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೆ ಆಪರೇಷನ್ ಕಮಲ ಸದ್ದು ಮಾಡುತ್ತಿದ್ದು, ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಶಿವರಾಜ್‌ ತಂಗಡಗಿ ಅವರು, ಈ ಬಾರಿ ಬಿಜೆಪಿಯವರು ಆಪರೇಷನ್ ಮಾಡಲು ಹೊರಟರೆ ಕತ್ತರೆ ಅವರ ಹೊಟ್ಟೆಯಲ್ಲಿ ಸಿಕ್ಕಿಕೊಂಡು ಬಿಜೆಪಿ ಅವರು ತೊಂದರೆ ಅನುಭವಿಸುತ್ತಾರೆ ಎಂದು ಹೇಳಿದ್ದಾರೆ.

ಬಿಜೆಪಿಯಿಂದ ಕಾಂಗ್ರೆಸ್ ಶಾಸಕರ ಆಪರೇಷನ್ ನಡೆಯುತ್ತಿದೆ ಎಂಬ ಶಾಸಕ ಗಾಣಿಗ ರವಿ ಆರೋಪ ವಿಚಾರಕ್ಕೆ ವಿಕಾಸ ಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಆಪರೇಷನ್ ಎಲ್ಲವೂ ಈ ಬಾರಿ ಆಗೋದಿಲ್ಲ. ಈ ಬಾರಿ ಆಪರೇಷನ್ ಮಾಡೋಕೆ ಹೋದ್ರೆ ಬಿಜೆಪಿ ಅವರ ಹೊಟ್ಟೆಯಲ್ಲೇ ಕತ್ತರಿ ಸಿಕ್ಕಿಕೊಳ್ಳುತ್ತೆ ಅಂತ ತಿರುಗೇಟು ನೀಡಿದ್ದಾರೆ.

ಬಿಜೆಪಿಯವರಿಗೆ ಆಪರೇಷನ್ ಮಾಡೋ ಹ್ಯಾಬಿಟ್ ಇದೆ. ಬಿಜೆಪಿಯವರಿಗೆ ಯಾವತ್ತೂ ಪೂರ್ಣ ಬಹುಮತ ಬಂದಿಲ್ಲ. ಪೂರ್ಣ ಬಹುಮತ ಪಡೆಯದೇ ಹೋದರೂ ಎರಡು ಬಾರಿ ಸರ್ಕಾರ ‌ಮಾಡಿದ್ದಾರೆ. ಒಮ್ಮೆ ನಾನೇ ಬಿಜೆಪಿ ಸರ್ಕಾರ ಬರಲು ಸಹಕಾರ ಕೊಟ್ಟಿದ್ದೆ. ಸಹಾಯ ಮಾಡಿದ ನನ್ನನ್ನೇ ನಡು ನೀರಿನಲ್ಲಿ ಕೈ ಬಿಟ್ಟರು. ಬಿಜೆಪಿ‌ಯವರಿಗೆ ಸಹಾಯ ಮಾಡಿದವರನ್ನ ನಡು ನೀರಿನಲ್ಲಿ ಬಿಡೋ ಬುದ್ಧಿ ಇದೆ. ಈ ಬಾರಿ ನಮಗೆ 135 ಸ್ಥಾನ ಬಂದಿದೆ. ನಮ್ಮ ಸರ್ಕಾರಕ್ಕೆ ಏನೂ ಆಗೊಲ್ಲ. ಜನರ ಹಾದಿ ತಪ್ಪಿಸೋಕೆ ಬಿಜೆಪಿಯವರು ಏನೇನೋ ಹೇಳ್ತಾರೆ ಅಷ್ಟೆ ಅಂತ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.

 

Related