ಬಿಜೆಪಿ ಸಂಸ್ಥಾಪನಾ ದಿನಾಚರಣೆ

ಬಿಜೆಪಿ ಸಂಸ್ಥಾಪನಾ ದಿನಾಚರಣೆ

ಕೊಟ್ಟೂರು : ಕೋವಿಡ್ ಹಿನ್ನೆಲೆಯಲ್ಲಿ ಭಾರತೀಯ ಜನತಾಪಕ್ಷದ ಸಂಸ್ಥಾಪನಾ ದಿನಾಚರಣೆ ಸರಳವಾಗಿ ಆಚರಣೆ ಮಾಡಲಾಯಿತು.
ಪಟ್ಟಣದ 6ನೇವಾರ್ಡ್ ರಾಜೇವ್ ನಗರದ ಬೂತ್ ಅಧ್ಯಕ್ಷ ಕಲ್ಲೇಶಪ್ಪನವರ ನಿವಾಸದ ಮೇಲೆ ಬಿಜೆಪಿ ಧ್ವಜವನ್ನು ಹಾರಿಸಿದರು.

ಜಿಲ್ಲಾ ಅಧ್ಯಕ್ಷ ಚನ್ನಬಸವನ ಗೌಡ ಮಾತನಾಡಿ, ಎಲ್ಲರೂ ಒಂದೇ ಎನ್ನುವ ಪಕ್ಷ ಬಿಜೆಪಿ. ಎಲ್ಲರೂ ಹುಟ್ಟಿದ ಹಬ್ಬವನ್ನು ಆಚರಿಸುತ್ತಾರೆ. ಹಾಗೆಯೇ ನಮ್ಮ ಬಿಜೆಪಿ ಪಕ್ಷ ಹುಟ್ಟಿದ ದಿನಕ್ಕೆ ಎಲ್ಲರಿಗೂ ಶುಭಾಶಯ ಎಂದರು.

ಯುವ ಮೋರ್ಚಾ ಉಪಾಧ್ಯಕ್ಷ ಉಮಾಪತಿ ಮಠದ ಬಿಜೆಪಿ ಪಕ್ಷದ ಸಂಸ್ಥಾನದ ದಿನ ಬಗ್ಗೆ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಮಂಡಲ ಕಾರ್ಯದರ್ಶಿ ಡಿ ರಾಕೇಶ್ ಮಂಡಲ ಅಲ್ಪಸಂಖ್ಯಾತ ಉಪಾಧ್ಯಕ್ಷ ಇಮ್ರಾನ್ ಕೆ. ಯುವ ಮೋರ್ಚಾ ಅಧ್ಯಕ್ಷ ಬರಮ್ಮಪ್ಪ ರೆಡ್ಡಿ, ಎರ್ಟೆಲ್ ಚಂದ್ರು, ಅರವಿಂದ್, ಮಂಜಣ್ಣ, ವಿಕಾಸ್, ಉಮೇಶ್ ಗೌಡ, ಪ್ರಜ್ವಲ್, ಚಂದ್ರ ಇನ್ನಿತತರಿದ್ದರು.

Related