ಮಹದೇವಪುರ: ಕರ್ನಾಟಕ ರಾಜ್ಯದಲ್ಲಿ ಬಿಸಿಲಿನ ಕಾವಿನ ಜೊತೆಗೆ ಲೋಕಸಭಾ ಚುನಾವಣೆಯ ಕಾವು ಕೂಡ ಹೆಚ್ಚಾಗುತ್ತಿದ್ದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯು ಶಕ್ತಿ ಪ್ರದರ್ಶನದಲ್ಲಿ ತೊಡಗಿದ್ದಾರೆ.
ಇನ್ನು ಲೋಕಸಭಾ ಚುನಾವಣೆಯ ಪ್ರಯುಕ್ತ ಪಿ ಸಿ ಮೋಹನ್ ಅವರ ಪರವಾಗಿ ಪ್ರಚಾರವನ್ನು ಕೈಗೊಂಡಿರುವ ಬಿಜೆಪಿ ಶಾಸಕಿ ಮಂಜುಳ ಅರವಿಂದ ಮತ್ತು ಲಿಂಬಾವಳಿರವರ ನೇತೃತ್ವದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಿದರು.
ಕೇಂದ್ರದಲ್ಲಿ ಸತತವಾಗಿ 10 ವರ್ಷದಿಂದ ಆಡಳಿತವನ್ನು ಕೈಗೊಂಡಿರುವ ಬಿಜೆಪಿಯ ರಾಷ್ಟ್ರ ನಾಯಕರೆಂದು ಮೋದಿಯವರು ಹೊರಹೊಮ್ಮಿದ್ದಾರೆ. ಮತ್ತೊಮ್ಮೆ ಮೋದಿಯನ್ನು ನಾವು ಅಧಿಕಾರಕ್ಕೆ ತರಬೇಕಾದರೆ ನಮ್ಮ ಕ್ಷೇತ್ರದಲ್ಲಿ ಪಿ ಸಿ ಮೋಹನ್ ಅವರಿಗೆ ಮತ ನೀಡಿ ಎಂದು ಅರವಿದ್ ಲಿಂಬಾವಳಿ ಮತ್ತು ಮಂಜುಳಾ ಲಿಂಬಾವಳಿಯವರು ಸಾರ್ವಜನಿಕರಿಗೆ ಮನವಿ ಮಾಡಿದರು..
ಕಾಂಗ್ರೇಸ್ ಅಧಿಕಾರಕ್ಕೆ ಬಂದಾಗಲೇಲ್ಲಾ ಬಾಂಬ್ ಸ್ಫೋಟಗಳು, ದೇಶ ವಿರೋದಿ ಘೋಷಣೆಗಳು ಮೊಳಗುತ್ತೇವೆ ದೇಶ ವಿರೋದಿ ಕೃತ್ಯಗಳು ನಡೆಯುತ್ತೇವೆಂದು ಕಾಂಗ್ರೆಸ್ ವಿರುದ್ಧ ಪಿ.ಸಿ.ಮೋಹನ್ ವಾಗ್ದಳಿ ನಡೆಸಿದರು.