ಬಿಜೆಪಿ ಬೆಂಬಲಿತ ಅಭ್ಯರ್ಥಿ ತರಾಟೆ

ಬಿಜೆಪಿ ಬೆಂಬಲಿತ ಅಭ್ಯರ್ಥಿ ತರಾಟೆ

ರಾಮನಗರ : ಕರ್ನಾಟಕದಲ್ಲಿ ಡಿ. 22 ಮತ್ತು 27ರಂದು ಗ್ರಾ.ಪಂ ಚುನಾವಣೆ ಮತದಾನ ನಡೆಯಲಿದೆ. ಡಿ. 30ರಂದು ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಯೊಬ್ಬರು ಪಕ್ಷದ ನಾಯಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಗ್ರಾ.ಪಂ ಚುನಾವಣೆಗೆ ಕೇವಲ 10 ಸಾವಿರ ಸಾಲುವುದಿಲ್ಲ, ಸುಮ್ಮನೆ ಇದ್ದವರನ್ನು ಕರೆತಂದು ಚುನಾವಣೆಗೆ ನಿಲ್ಲಿಸಿದ್ದೀರಿ ಎಂದು ಬಿಜೆಪಿ ಬೆಂಬಲಿತ ಮಹಿಳಾ ಅಭ್ಯರ್ಥಿ ಬಿಜೆಪಿ ಮುಖಂಡನಿಗೆ ನಡು ಬೀದಿಯಲ್ಲೇ ತರಾಟೆ ತೆಗೆದುಕೊಂಡಿದ್ದಾರೆ.

ರಾಮನಗರ ತಾಲೂಕಿನ ಮಾಯಗಾನಳ್ಳಿ ಗ್ರಾ.ಪಂ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಮಲಮ್ಮ ತಾಲೂಕು ಬಿಜೆಪಿ ಅಧ್ಯಕ್ಷ ಜಗದೀಶ್ ಅವರ ಬಳಿ ಚುನಾವಣೆ ಖರ್ಚಿಗೆ ಹಣ ನೀಡಿ ಎಂದು ಗಲಾಟೆ ಮಾಡಿದರು.

ನೀವು ಕೇವಲ 10 ಸಾವಿರ ಕೊಟ್ಟರೆ ಹೇಗೆ ಚುನಾವಣೆ ಮಾಡುವುದು?, ಪ್ರತಿ ಅಭ್ಯರ್ಥಿಗೆ 2 ಲಕ್ಷ ನೀಡಿದರು. ಅನ್ನುವ ಸುದ್ದಿ ಇದೆ. ಆದರೆ, ನೀವು ಕೇವಲ ಹತ್ತು ಸಾವಿರ ಕೊಡಲು ಬಂದಿದ್ದೀರಾ? ಮತದಾರರಿಗೆ 10ರೂ. ಕೊಡೊದಾ ಎಂದು ಪ್ರಶ್ನೆ ಮಾಡಲಾಗಿದೆ ಎಂದರು.

Related