ಮಲ್ಲಿಕಾರ್ಜುನ್ ಖರ್ಗೆರವರಿಗೆ ಹುಟ್ಟುಹಬ್ಬದ ಸಂಭ್ರಮ

ಮಲ್ಲಿಕಾರ್ಜುನ್ ಖರ್ಗೆರವರಿಗೆ ಹುಟ್ಟುಹಬ್ಬದ ಸಂಭ್ರಮ

 ಚಿಂಚೋಳಿ  : ಭಾರತ ದೇಶ ಕಂಡಂತಹ ಧೀಮಂತ ನಾಯಕ, ಕಲ್ಯಾಣ ಕರ್ನಾಟಕದ 371 ಜೆ. ಕಲಂ ತಿದ್ದುಪಡಿಯ ರೂವಾರಿ, ಸರ್ವ ಜನಾಂಗದ ಅಭಿವೃದ್ಧಿ ಹರಿಕಾರ, ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಹಾಗೂ 80ನೇ ವಸಂತಕ್ಕೆ ಕಾಲಿಡುತ್ತಿರುವ ಡಾ. ಮಲ್ಲಿಕಾರ್ಜುನ ಖರ್ಗೆ ರವರಿಗೆ ಚಿಂಚೋಳಿ ಕಾಂಗ್ರೆಸ್ ಮುಖಂಡ ಸುಭಾಷ್ ವ್ಹಿ. ರಾಠೋಡ್ ರವರು ನವದೆಹಲಿಯಲ್ಲಿರುವ ಖರ್ಗೆ ರವರ ನಿವಾಸಕ್ಕೆ ತೆರಳಿ ಹೂಗುಚ್ಛ ನೀಡುವ ಮುಖಾಂತರ ಶುಭಾಶಯಗಳು ಕೋರಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಜಗದೇವ ಗುತ್ತೇದಾರ, ಮಾಜಿ ಎಂಎಲ್‌ಸಿ ಅಲ್ಲಂಪ್ರಭು ಪಾಟೀಲ್, ಭೀಮರಾವ ಟಿ.ಟಿ, ಮೈಮುದ ಪಟೇಲ್, ನೀಲಕಂಠರಾವ್ ಮುಲಗೆ, ದೇವೇಂದ್ರಪ್ಪ ಮರತುರ, ಅನೇಕ ಮುಖಂಡರು ಉಪಸ್ಥಿತರಿದ್ದರು.

Related