ಯಾದಗಿರಿ: ಯಾದಗಿರಿ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವೃದ್ಧ ದಂಪತಿ ನರಳಾಟ ಅನುಭವಿಸುತ್ತಿದ್ದಾರೆ..
ಯಾದಗಿರಿಯಿಂದ ರಾಯಚೂರಿನ ಆಸ್ಪತ್ರೆಗೆ ತೆರಳಬೇಕಿರುವ ದಂಪತಿಗೆ ಭಾರತ್ ಬಂದ್ನಿಂದಾಗಿ ದಿಕ್ಕು ತೋಚದಂತಾಗಿ ಕಂಗಲಾಗಿದ್ದಾರೆ.
ರೈತರಪರ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ಗೆ ಯಾದಗಿರಿಯಲ್ಲಿ ಸಹ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಬಸ್ ಸಂಚಾರವನ್ನು ಏಕಾಏಕಿ ನಿಲ್ಲಿಸಲಾಗಿದೆ. ಇದರಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ವೃದ್ಧೆ ಮೌಲಮ್ಮ ಎಂಬುವವರಿಗೆ ಬಹಳಷ್ಟು ತೊಂದರೆಯಾಗಿದೆ.
ಬಂದ್ ಹಿನ್ನೆಲೆ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಸಂಪೂರ್ಣ ನಿತ್ರಾಣಗೊಂಡಿರುವ, ನಾಯ್ಕಲ್ ಗ್ರಾಮದ ವೃದ್ಧ ದಂಪತಿ ಬಸ್ ನಿಲ್ಲುವ ಪ್ಲಾರ್ಟ್ ಫಾರ್ಮ್ನಲ್ಲಿ ಮಲಗಿದ್ದಾರೆ. ಬಸ್ ಸಂಚಾರ ಏಕಾಏಕಿ ನಿಂತಿರುವ ಹಿನ್ನಲೆ ಮುಂಬೈ, ಆಂಧ್ರ, ತೆಲಂಗಾಣದಿಂದ ಜಿಲ್ಲೆಗೆ ಬಂದಿರುವ ಪ್ರಯಾಣಿಕರು ಸಹ ಬಹಳಷ್ಟು ಆತಂಕಗೊಂಡಿದ್ದಾರೆ.