ಬೆಂಗಳೂರು : ಜೂನ್ 1 ರಿಂದ ಎಲ್ಲಾ ದೇವಾಲಯಗಳ ಬಾಗಿಲು ತೆರೆಯಲು ಸರ್ಕಾರ ನಿರ್ಧಾರ ಮಾಡಿದೆ.
ಲಾಕ್ಡೌನ್ನಿಂದಾಗಿ ಕಳೆದ ಎರಡೂವರೆ ತಿಂಗಳಿಂದ ಎಲ್ಲಾ ದೇವಾಲಯಗಳು ಬಾಗಿಲು ಹಾಕಲಾಗಿದೆ. ಲಾಕ್ಡೌನ್ ಮುಂದುವರೆದ ಬೆನ್ನಲ್ಲೇ ದೇವರ ದರ್ಶನದ ಅವಕಾಶವನ್ನು ಆನ್ಲೈನ್ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿತ್ತು. ಆದರೆ ಇದೀಗ ಆ ಪ್ರಸ್ತಾವನೆಯನ್ನು ಸರ್ಕಾರ ಕೈಬಿಟ್ಟದೆ.
ಮಹಾ ಮಂಗಳಾರತಿ, ವಿಶೇಷ ಸೇವೆಗಳಿಗೆ ಬುಕ್ ಮಾಡಲು ಮಾತ್ರ ಆನ್ಲೈನ್ ನಲ್ಲಿ ಇರಲಿದೆ. ದೇವಾಲಯದಲ್ಲಿ ಸಾಮಾನ್ಯ ದರ್ಶನವನ್ನು ನೇರವಾಗಿ ಅಲ್ಲಿಯೇ ಹೋಗಿ ಮಾಡಬಹುದು. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಕಡ್ಡಾಯವಾಗಿದೆ.