ಮಂಗಳಮುಖಿಯರು ಸೇರಿ ಹಲವರಿಗೆ ಆಹಾರ ವಿತರಿಸಿದ ಸಚಿವ ಬಿ.ಎ.ಬಸವರಾಜು

ಮಂಗಳಮುಖಿಯರು ಸೇರಿ ಹಲವರಿಗೆ ಆಹಾರ ವಿತರಿಸಿದ ಸಚಿವ ಬಿ.ಎ.ಬಸವರಾಜು

ಚಿತ್ರದುರ್ಗ : ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜು ಅವರು ಮುರುಘ ಮಠದ ಆವರಣದಲ್ಲಿ , ತಳಸಮುದಾಯ ಹಾಗೂ ಮಂಗಳಮುಖಿಯರು ಸೇರಿದಂತೆ ಹಲವರಿಗೆ ಆಹಾರ ವಿತರಿಸಿದರು.

ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ಅವರು ಇಂದು ಬೆಳಿಗ್ಗೆ ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಮುರುಘ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಮೂರ್ತಿ ಶಿವಾಚಾರ್ಯ ಅವರ ಆಶೀರ್ವಚನ ಪಡೆದರು.

ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ಅಲೆಮಾರಿ ,ಬುಡಕಟ್ಟು, ತಳಸಮುದಾಯ ಹಾಗೂ ಮಂಗಳಮಖಿಯರಿಗೆ ಮಠದ ಆವರಣದಲ್ಲಿ ಚಿತ್ರದುರ್ಗ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹಾಗೂ ಶ್ರೀ ಮಠದ ಸಹಯೋಗದೊಂದಿಗೆ ಉಚಿತವಾಗಿ ಆಹಾರ ಪದಾರ್ಥಗಳನ್ನು ನೀಡಿದರು.

ದಾವಣಗೆರೆ ಜಿಲ್ಲೆಯ ಜಗಳೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೆಲ ಗ್ರಾಮಗಳ ಬಡ ಹಾಗೂ ಕೂಲಿ ಕಾರ್ಮಿಕರಿಗೆ ಉಚಿತವಾಗಿ ಆಹಾರ ಧಾನ್ಯಗಳ ಕಿಟ್ ವಿತರಿಸಿದರು.

Related