ಧಾರವಾಡ : ಇಂದು ಮೈಸೂರು ಕಾರಾ ಗೃಹದಲ್ಲಿದ್ದುಕೊಂಡು ಹುಬ್ಬಳ್ಳಿ ಧಾರವಾಡ ಅವಳಿ ನಗರದ ಉದ್ಯಮಿಗಳು, ವ್ಯಾಪಾರಸ್ಥರಿಗೆ ಹಫ್ತಾ ವಸೂಲಿ ಮತ್ತ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಬಂಧಿತನಾಗಿರುವ ಭೂಗತ ಪಾತಕಿ ಬಚ್ಚಾಖಾನ್ ನನ್ನು ಧಾರವಾಡ ಪೋಲಿಸರು ನ್ಯಾಯಾಲಯಕ್ಕೆ ಹಾಜರು ಪಡೆಸಿದರು.
ಭಾನುವಾರ ರಾತ್ರಿಯೇ ಮೈಸೂರುನಿಂದ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಬಚ್ಚಾಖಾನನ್ನು ತರಲಾಗಿತ್ತು. ಇಂದು ಮಧ್ಯಾಹ್ನ ಉಪನಗರ ಠಾಣೆ ಪೋಲಿಸರು ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಲಯಕ್ಕೆ ಬಚ್ಚಾಖಾನ್ ನನ್ನು ಹಾಜರು ಪಡಿಸಿದರು.
ಪ್ರೂಟ್ ಇರ್ಪಾನ್ ಕೊಲೆ ಪ್ರಕರಣದ ನಂತರ ಅವಳಿ ನಗರದಲ್ಲಿ ಬಚ್ಚಾಖಾನ್ ಬೆಂಬಲಿಗರ ಹಾವಳಿ ಹೆಚ್ಚಾಗುತ್ತಿದ್ದು ಅಲ್ಲಲ್ಲಿ ಜೀವ ಬೆದರಿಕೆ ಹಫ್ತಾ ವಸೂಲಿ ಪ್ರಕರಣಗಳು ನಡೆಯುತ್ತಿವೆ.