ಕಳ್ಳಬಟ್ಟಿ ದಂಧೆ: ದಾಳಿ

  • In Crime
  • December 16, 2020
  • 516 Views
ಕಳ್ಳಬಟ್ಟಿ ದಂಧೆ: ದಾಳಿ

ಗುಳೇದಗುಡ್ಡ: ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ಹಾನಾಪೂರ ಎಲ್.ಟಿ. ಹಾಗೂ ಹುಲ್ಲಿಕೇರಿ ಎಲ್ ಟಿ ಗ್ರಾಮಗಳಲ್ಲಿ ಅರಣ್ಯ ಇಲಾಖೆಯ ಜಾಗದಲ್ಲಿ ನಡೆಯುತ್ತಿದ್ದ ಅಕ್ರಮ ಕಳ್ಳಬಟ್ಟಿ ಕೇಂದ್ರಗಳ ಮೇಲೆ ದಾಳಿ ನಡೆಸಿ, ಕೊಡಗಳನ್ನು ನಾಶ ಪಡಿಸಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.

ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳ್ಳಬಟ್ಟಿ ಸರಾಯಿ ಬಗ್ಗೆ ಸಾರ್ವಜನಿಕರಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಜೊತೆಗೆ ನೂರಾರು ಕುಟುಂಬಗಳನ್ನು ಬೀದಿಗೆ ತಳ್ಳುವ ಕಳ್ಳಬಟ್ಟಿ ಸರಾಯಿ ಸಂಪೂರ್ಣವಾಗಿ ಬಂದ್ ಮಾಡಬೇಕು ಎಂದು ಬಾದಾಮಿ ತಹಶೀಲ್ದಾರ್ ಇಂಗಳೆ ತಿಳಿ ಹೇಳಿದರು.

ಸಿಪಿಐ ರಮೇಶ ಹಾನಾಪೂರ, ಮಾತನಾಡಿದರು. ಪಿಎಸ್‍ಐ .ಪಿ.ಎಮ್.ಪಟಾತರ, ಅಬಕಾರಿ ಪಿ ಐ ಹಗಳಗರ ಅವರ ನೇತೃತ್ವದಲ್ಲಿ ಸಿಬ್ಬಂದಿ ಜಿ ವಿ, ಮನ್ನಿಕಟ್ಟಿ, ವೈ. ಎಮ್ ಮನ್ನಿಕಟ್ಟಿ , ಎಚ್.ಪಿ ಕೂಗಟಿ, ಸಯ್ಯದ ಡಂಗಿ, ಗುರು ಸುನಗದ ಚಾಲಕರಾದ ಮೇಟಿ ಹಾಗೂ ತಮ್ಮನ್ನವರ ಮತ್ತಿತರರು ಇದ್ದರು.

Related