ವಿಜಯ ಪ್ರಕಾಶ್ ಸಿಎಂ ಪರಿಹಾರ ನಿಧಿಗೆ ನೆರವು

  • In State
  • April 4, 2020
  • 465 Views
ವಿಜಯ ಪ್ರಕಾಶ್ ಸಿಎಂ ಪರಿಹಾರ ನಿಧಿಗೆ ನೆರವು

ಬೆಂಗಳೂರು, ಏ. 04: ಕೊರೋನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರಿಂದ ದೇಶದಾದ್ಯಂತ ಲಾಕ್ ಡೌನ್ ಘೋಷಣೆ  ಮಾಡಿದ್ದಾರೆ. ಈ ಲಾಕ್ ಡೌನ್ ನಿಂದಾಗಿ ಬಡವರಿಗೆ ತೊಂದರೆಯಾಗುತಿದೆ. ಕೊರೊನಾ ತಡೆಗೆ ಕನ್ನಡ ಚಿತ್ರರಂಗದ ಕೆಲವರು ಸಹಾಯ ಹಸ್ತಾ ಚಾಚಿದ್ದಾರೆ ಇದೀಗ ಗಾಯಕ ವಿಜಯ್ ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ಪರಿಹಾರ ಮೊತ್ತ ಹಸ್ತಾಂತರಿಸಿದ್ದಾರೆ.

”ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ’ ಅಂತ ಪುರಂದರ ದಾಸರು ಹೇಳಿರುವಂತ ಮಾತು, ನನ್ನ ಜೀವನದಲ್ಲಿ ಸಮಸ್ತ ಕನ್ನಡ ಜನತೆ ಆ ಪ್ರೀತಿಯ ಬೊಗಸೆಯನ್ನ ತುಂಬಿಸಿ ಕೊಟ್ಟಿದ್ದಾರೆ. ಆ ಬೊಗಸೆಯಿಂದ ಒಂದು ಚಿಕ್ಕ ಕಾಣಿಕೆ ಜನರಿಗಾಗಿ ಮಾಡೋದು ನನ್ನ ಸೌಭಾಗ್ಯ, ನನ್ನ ಕರ್ತವ್ಯ, ಇದು ಭಗವಂತನ ಕೃಪೆ ಎಂದು ಭಾವಿಸುತ್ತೇನೆ.” ಎಂದು ವಿಜಯ್ ಪ್ರಕಾಶ್ ಸಂತಸ ಹಂಚಿಕೊಂಡಿದ್ದಾರೆ.

 

Related