ಈ ಕಾಟೇರ ಸಿನಿಮಾ 50 ದಿನಗಳ ಪೊರೆಕೆ ಸಂಭ್ರಮವನ್ನು ಇಂದು ಬೆಂಗಳೂರಿನಲ್ಲಿ ಪ್ರಸನ್ನ ಥಿಯೇಟರ್ ನಲ್ಲಿ ಏರ್ಪಡಿಸಲಾಗಿದ್ದು, ಈ ಸಂದರ್ಭದಲ್ಲಿ ನಟ ದರ್ಶನ್ ತೂಗುದೀಪ್ ಅವರು ನಿರ್ಮಾಪಕ ಉಮಾಪತಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು, ಇತ್ತೀಚಿಗೆ ಕಾಟೇರ ಟೈಟಲ್ ಕೊಟ್ಟಿದ್ದು ಯಾರು ಅನ್ನೋ ಗೊಂದಲವಿತ್ತು. ಕಾಟೇರ ಟೈಟಲ್ ಕೊಟ್ಟಿದ್ದು ನಾನೇ ಎಂದು ಹೇಳಿಕೆ ನೀಡಿರುವ ಉಮಾಪತಿ ಶ್ರೀನಿವಾಸ್ರವರಿಗೆ ದರ್ಶನ್ ಕ್ಲಾರಿಟಿ ನೀಡಿದ್ದಾರೆ.
‘ಕೆಲವರು ಹೇಳಿದರು ಕಥೆ ನಾನು ಮಾಡಿಸಿದೆ ಟೈಟಲ್ ನಾನು ಕೊಟ್ಟೆ ಅಂತ. ಅಯ್ಯೋ ತಗಡೇ. ನಿನಗೆ ರಾಬರ್ಟ್ ಕಥೆ ಕೊಟ್ಟಿದ್ದೇ ನಾವು. ಯಾವತ್ತೂ ಕೊಟ್ಟಿದ್ದು ಮಾಡಿದ್ದು ಹೇಳಬಾರದು. ಭಗವಂತ…ಈಗಾಗಲೆ ಒಂದು ಸಲ ಸಿಗಾಕೊಂಡು ಬಾಯಿಂದ ಹೇಳಿಸಿಕೊಂಡು ಬುದ್ಧಿ ಕಲಿತಿಲ್ಲ ಅಂದ್ರೆ ನಾವು ಏನ್ ಹೇಳೋಣ. ಇಂಥ ಹಳ್ಳೆ ಕಥೆಯನ್ನು ಯಾಕಪ್ಪಾ ಬಿಟ್ಟೆ ನೀನು? ನೀನು ಮಾಡಿಸಿ ಅಂದ್ಮೇಲೆ ಯಾಕೆ ಕಥೆ ಬಿಟ್ಟೆ? ನಿನ್ನ ಜಡ್ಜ್ಮೆಂಟ್ ಅಷ್ಟು ಚೆನ್ನಾಗಿದೆ ಅಂದ್ಮೇಲೆ ಸಿನಿಮಾ ಮಾಡ್ಬೋದಿತ್ತು ಅಲ್ವಾ? ಟೈಟಲ್ ನಾನು ಕೊಟ್ಟೆನಾ?……ಟೈಟಲ್ ಇಟ್ಟಿದ್ದೇ ನಾನು. ಅದಕ್ಕೊಂದು ಕ್ಲಾರಿಟಿ ಕೊಡುತ್ತೀನಿ. ಎಲ್ಲಾ ಆಧಾರ ಇಟ್ಟುಕೊಂಡು ಮಾತನಾಡಬೇಕು ಏಕೆಂದರೆ ನಾವು ಸುಳ್ಳು ಹೇಳುತ್ತಿದ್ದೀವಿ ಅಂತಾರೆ ಆಮೇಲೆ’ ಎಂದು ದರ್ಶನ್ ಹೇಳುತ್ತಾ ವೇದಿಕೆ ಮೇಲೆ ಮಹೇಶ್ರನ್ನು ಕರೆಸಿದರು.
‘ಮದಗಜ ಟೈಟಲ್ ರಾಮೂರ್ತಿ ಸರ್ ಬಳಿ ಇತ್ತು. ಅದನ್ನು ತೆಗೆದುಕೊಳ್ಳುವಾಗ ಕಾಟೇರ ಟೈಟಲ್ನ ಉಮಾಪತಿ ಸರ್ ಕೊಟ್ರು. ಮದಗಜ ಟೈಟಲ್ನ ಬಾಸ್ ಹೇಳಿದ ತಕ್ಷನ್ ರಾಮೂರ್ತಿ ಸರ್ ಕೊಟ್ರು. ಥ್ಯಾಂಕ್ ಯು ರಾಮೂರ್ತಿ ಸರ್…. ಮಹೇಶ್’ ಎಂದು ನಿರ್ದೇಶಕ ಮಹೇಶ್ ಹೇಳಿದ್ದಾರೆ.