ಅರ್ಚಕರ ಕಿತ್ತಾಟ, ದೇಗುಲಕ್ಕೆ ಬಿತ್ತು ಬೀಗ

  • In State
  • March 4, 2020
  • 496 Views
ಅರ್ಚಕರ ಕಿತ್ತಾಟ, ದೇಗುಲಕ್ಕೆ ಬಿತ್ತು ಬೀಗ

ಹಾಸನ, ಮಾ. 4 : ದೇವಾಲಯದಲ್ಲಿ ಪೂಜೆಗಾಗಿ ಅರ್ಚಕರ ಎರಡು ಗುಂಪಿನ ನಡುವೆ ಕಿತ್ತಾಟವಾಗಿ ದೇವಾಲಯಕ್ಕೆ ಬೀಗ ಹಾಕಿರುವ ಘಟನೆ ಹಾಸನದಲ್ಲಿ ನಡೆದಿದೆ.
ಅರಕಲಗೂಡು ತಾಲೂಕಿನ ಹರದೂರುಪುರ ಗ್ರಾಮದಲ್ಲಿ ರಂಗನಾಥಸ್ವಾಮಿ ದೇವಾಲಯವಿದೆ. ಮೂವರು ಅರ್ಚಕರ ಒಂದು ಗುಂಪು ಮತ್ತು 24 ಮಂದಿ ಅರ್ಚಕರ ಮತ್ತೊಂದು ಗುಂಪಿನ ನಡುವೆ ಪೂಜೆಗಾಗಿ ಕಿತ್ತಾಟ ನಡೆದಿದೆ. ರಾಮಸ್ವಾಮಿ, ಧರ್ಮರಾಜ್, ಚಿನ್ನಸ್ವಾಮಿ ಎಂಬ ಅರ್ಚಕರ ಒಂದು ಗುಂಪು ಮತ್ತು ರಂಗನಾಥ್, ಗೋವಿಂದಯ್ಯ ಸೇರಿ 24 ಮಂದಿಯ ಮತ್ತೊಂದು ಗುಂಪಿನ ನಡುವೆ ಗಲಾಟೆ ಶುರುವಾಗಿದೆ. ಡಿಸಿ ಕೋರ್ಟ್ ಮತ್ತು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಎರಡೂ ನ್ಯಾಯಾಲಯದಲ್ಲಿ ರಾಮಸ್ವಾಮಿ, ಧರ್ಮರಾಜ್, ಚಿನ್ನಸ್ವಾಮಿ ಪರ ಆದೇಶವಾಗಿದೆ. ಕೋರ್ಟ್ ಆದೇಶವಿದ್ದರೂ ರಂಗನಾಥ್ ಅವರ ಗುಂಪು ಅಧಿಕಾರಿಗಳ ಮುಂದೆಯೇ ದೇವಾಲಯದ ಬೀಗ ನೀಡದೆ ಗಲಾಟೆ ಮಾಡಿದೆ.

Related