ನೂತನ ತಾಲೂಕು ಅಧ್ಯಕ್ಷರಾಗಿ ನೇಮಕ

ನೂತನ ತಾಲೂಕು ಅಧ್ಯಕ್ಷರಾಗಿ ನೇಮಕ

ಗಜೇಂದ್ರಗಡ : ಜೈ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಸಮಿತಿ ವತಿಯಿಂದ ಗಜೇಂದ್ರಗಡ ತಾಲೂಕ ಅಧ್ಯಕ್ಷರನ್ನಾಗಿ ಕುಮಾರ ಹಿರೇಮಠ ಹಾಗೂ ಉಪಾಧ್ಯಕ್ಷರಾಗಿ ರಮೇಶ ಮಡಿವಾಳರ ಹಾಗೂ ಪದಾಧಿಕಾರಿಗಳ ನೇಮಕ ಮಾಡಲಾಯಿತು.

ತಾಲೂಕು ಉಪಾಧ್ಯಕ್ಷ ರಮೇಶ್ ಮಡಿವಾಳರ್ ಮಾತನಾಡಿ, ಉಪಾಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಎಲ್ಲಾ ಧುರಿಣರಿಗೆ ನಮನಗಳು ಸಲ್ಲಿಸುತ್ತಾ, ಪ್ರೀತಿ ವಿಶ್ವಾಸದಿಂದ ಎಲ್ಲರೊಂದಿಗೆ ಒಗ್ಗಟ್ಟಿನಿಂದ ಕನ್ನಡ ನಾಡು ನುಡಿ, ಸಂಸ್ಕೃತಿಗೆ ಧಕ್ಕೆ ಬಾರದಂತೆ ಕನ್ನಡ ನಾಡು ನುಡಿಯನ್ನು ಉಳಿಸುವ ದೃಷ್ಠಿಯಿಂದ ಕರ್ತವ್ಯ ನಿರ್ವಹಿಸುತ್ತೇನೆ. ರಾಜ್ಯಾಧ್ಯಕ್ಷರ ಹಾಗೂ ಜಿಲ್ಲಾಧ್ಯಕ್ಷರ ಮಾರ್ಗದರ್ಶನದಂತೆ ಸಕ್ರಿಯವಾಗಿ ಹೋರಾಟ ಮಾಡಿ ಜನರಿಗೆ ಕನ್ನಡ ನಾಡಿಗೆ ದುಡಿಯುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪ್ರಕಾಶ್ ಹಿರೇಮಠ, ವೆಂಕಟೇಶ್ ಶಾಂತಗೇರಿ, ವೀರೇಶ್ ಹಿರೇಮಠ, ಮೋಹನ್ ವರವಿ, ಅಡಿವೆಪ್ಪ ಬಾಗಲಕೋಟೆ, ಹಜರತ್ ಲಕ್ಷ್ಮೇಶ್ವರ, ಮಹಾರುದ್ರಪ್ಪ ಉಮಚಗಿ, ಆನಂದ್ ಸವಣೂರ, ಅಂದಪ್ಪ ಹೊಸಂಗಡಿ, ಈಶಪ್ಪ ಹಡಪದ್, ಶ್ರೀಕಾಂತ್ ಕುಂಬಾರ್, ಕಾಳಪ್ಪ ಕಮ್ಮಾರ, ಪ್ರಭು ಗುರಿಕಾರ್, ಮುತ್ತು ಮಾದರ್, ಕಳಕಪ್ಪ ಗುರಿಕಾರ್, ಶಿವು ಹಿರೇಮಠ. ಸೇರಿದಂತೆ ಮತ್ತಿತರರು ಇದ್ದರು.

Related