ಸರ್ಜಾ ಕುಟುಂಬದಿಂದ ಭಾವನಾತ್ಮಕ ಓಲೆ

ಸರ್ಜಾ ಕುಟುಂಬದಿಂದ ಭಾವನಾತ್ಮಕ ಓಲೆ

ಬೆಂಗಳೂರ : ನಿನ್ನ ತಾತ ನಿಂಗೆ ಚಿರಂಜೀವಿ ಅಂತ ಹೆಸರಿಟ್ಟರು. ಅದ್ಯಾವತ್ತು ಸುಳ್ಳಾಗಲ್ಲ. ನಿನ್ನ ಮಾತು, ನಿನ್ನ ಚಿರುನಗು, ನಿನ್ನ ನೆನಪು, ನಮ್ಮ ಸಂಬಂಧ ಯಾವಾಗಲೂ ಚಿರಂಜೀವಿಯಾಗೇ ಇರುತ್ತೆ ಬಂಗಾರ.

ಪುಣ್ಯ ತಿಥಿಯ ದಿನದಂದು ಚಿರು ಕುಟುಂಬದವರು ತಮ್ಮ ಮನೆ ಮಗನಿಗೆ ಭಾವನಾತ್ಮಕ ಓಲೆಯ ಮೂಲಕ ನುಡಿನಮನ ಸಲ್ಲಿಸಿದ್ದಾರೆ. ಅರ್ಜನ್ ಸರ್ಜಾ ಅವರ ಮನದಾಳದ ಮಾತುಗಳಲ್ಲಿ ಮೂಡಿ ಬಂದಿರುವ ಓ ಪತ್ರದಲ್ಲಿ ಚಿರು ನೀನು ಮತ್ತೆ ಹುಟ್ಟಿ ಬರಬೇಕೆಂದು ಕೇಳಿಕೊಳ್ಳಲಾಗಿದೆ. ಈ ಪತ್ರದ ಸಾರಾಂಶ ಹೀಗಿದೆ.

ಮನೆ ಮಗನಿಗೆ ಮನವಿ ಚಿನ್ನ ನಿನ್ನ ಮನಸ್ಸಿಗೆ ಯಾರಾದರೂ ಬೇಜಾರು ಮಾಡಿದ್ರೆ, ನೀನು ಕೋಪ ಮಾಡಿಕೊಂಡು ಸ್ವಲ್ಪ ಮಾತಾಡಿದ್ರು, ನಮ್ಮನ್ನು ಬೈಕೊಂಡಿದ್ರು, ನಮಗೆ ಹೇಳದೆ ಯಾವುದಾದರೂ ಊರಿಗೆ ಹೋಗಿ ಬಂದಿದ್ರು ಪರವಾಗಿರುತ್ತಿರಲಿಲ್ಲ. ಆದರೆ ವಾಪಸ್ಸೇ ಬರಕ್ಕಾಗದಿರೋ ಅಂತ ಊರಿಗೆ ಹೋಗಿ ನಮಗೆಲ್ಲಾ ಅಂತ ಶಿಕ್ಷೆ ಕೊಟ್ಟಿದಿಯಲ್ಲಪ್ಪ.

ಕಣ್ಣು ಮುಚ್ಚಿದರೂ ನೀನೆ, ಕಣ್ಣು ತೆರೆದ್ರು ನೀನೆ, ನಿನ್ನ ನಗು ಮುಖ. ಸರಿ ಸ್ವಲ್ಪ ದಿನ ಆದ ಮೇಲೆ ಮರೆತು ಬಿಡುತ್ತಾರೆ ಎಂತ ನೀನು ತಿಳಿದುಕೊಂಡರೆ ಅದು ಸುಳ್ಳು. ನಮ್ಮೆಲ್ಲರಿಗೂ ಇದು ದೊಡ್ಡ ಗಾಯ. ಆರದೆ ಇರುವ ಅಂತ ಗಾಯ. ಯಾವಾಗಲೂ ನಮ್ಮ ಮನಸಲ್ಲಿ, ಹೃದಯದಲ್ಲೇ ಇರುತ್ತೀಯ ಕಂದ.

ದಯವಿಟ್ಟು ನೀನೆ ನಿನ್ನ ಮಗುವಾಗಿ ನಮ್ಮ ಮಡಿಲಿಗೆ ಬಂದು ಬಿಡು ಕಂದ. ಆ ಮಗು ನಗುವಿನಲ್ಲೇ ನಿನ್ನ ನೋಡುತ್ತೀವಿ. ಪ್ಲೀಸ್…ಈ ಮನಮಿಡಿಯುವ ಪತ್ರ ಇದೀಗ ಭಾರೀ ವೈರಲ್ ಆಗಿದೆ.

ಅದರೊಂದಿಗೆ ಚಿರು ಮತ್ತೊಮ್ಮೆ ಚಿರುವಾಗಿ ಹುಟ್ಟಿ ಬರಲಿ ಎಂಬುದು ಎಲ್ಲರ ಪ್ರಾರ್ಥನೆ. ಅದರೊಂದಿಗೆ ಚಿರು ಮತ್ತೊಮ್ಮೆ ಚಿರುವಾಗಿ ಹುಟ್ಟಿ ಬರಲಿ ಎಂಬುದು ಎಲ್ಲರ ಪ್ರಾರ್ಥನೆ.

Related