ಅಂಬೇಡ್ಕರ್ ಭವನ: ಎಚ್‌ಡಿಕೆ-ಸಿಪಿವೈ ಬೆಂಬಲಿಗರ ಗುದ್ದಾಟ

ಅಂಬೇಡ್ಕರ್ ಭವನ: ಎಚ್‌ಡಿಕೆ-ಸಿಪಿವೈ ಬೆಂಬಲಿಗರ ಗುದ್ದಾಟ

ರಾಮನಗರ : ಚನ್ನ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅಂಬೇಡ್ಕರ್ ಭವನ ಉದ್ಘಾಟನೆಗೆ ಸಿ.ಪಿ ಯೋಗೇಶ್ವರ್ ಬೆಂಬಲಿಗರ ಅಡ್ಡಿಪಡಿಸಿದ ಆರೋಪ ಕೇಳಿಬಂದಿದೆ.

ಶಾಸಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ಸಿ.ಪಿ ಯೋಗೇಶ್ವರ್ ನಡುವೆ ಅಂಬೇಡ್ಕರ್ ಭವನ ವಿಚಾರ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ಕಳೆದ 17 ವರ್ಷಗಳಿಂದ ಅಂಬೇಡ್ಕರ್ ಭವನ ಉದ್ಘಾಟನೆಯಾಗಿರಲಿಲ್ಲ. ಎಚ್.ಡಿ.ಕುಮಾರಸ್ವಾಮಿ ಕ್ಷೇತ್ರದ ಶಾಸಕ ಬಳಿಕ ಭವನದ ಕಾಮಗಾರಿ ಪೂರ್ಣಗೊಂಡಿದ್ದು, ನಾಳೆ ಉದ್ಘಾಟನೆಯಾಗಲಿದೆ.

ನಾಳೆ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಂಬೇಡ್ಕರ್ ಭವನವನ್ನು ಉದ್ಘಾಟನೆ ಮಾಡಲಿದ್ದಾರೆ.
ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಚ್‌ಡಿಕೆ ವಹಿಸಲಿದ್ದಾರೆ. ಆದರೆ ಭವನ ಉದ್ಘಾಟನೆ ಮಾಡಬಾರದು ಎಂದು ಸಿ.ಪಿ.ಯೋಗೇಶ್ವರ್ ಬೆಂಬಲಿಗರ ಪಟ್ಟು ಹಿಡಿದಿದ್ದಾರೆ.
ಭವನ ಕಾಮಗಾರಿ ಪೂರ್ಣವಾಗಿದೆ ಎಂದು ಜೆಡಿಎಸ್ ಮುಖಂಡರು ವಾದಿಸುತ್ತಿದ್ದಾರೆ. ಭವನ ಉದ್ಘಾಟನೆ ಮಾಡಿದರೆ ಹೋರಾಟದ ಎಚ್ಚರಿಕೆಯನ್ನು ಸಿಪಿವೈ ಬೆಂಬಲಿಗರು ಕೊಟ್ಟಿದ್ದಾರೆ. ಏನೇ ಆಗಲಿ ನಾಳೆ ಭವನ ಉದ್ಘಾಟನೆ ಆಗುತ್ತದೆ ಎಂದು ಎಚ್‌ಡಿಕೆ ಬೆಂಬಲಿಗರು ಹೇಳಿದರು.

Related