ಆಮ್ ಆದ್ಮಿ ಪಕ್ಷ ಗೆದ್ದಿದೆ: ಡಿಸಿಎಂ

ಆಮ್ ಆದ್ಮಿ ಪಕ್ಷ ಗೆದ್ದಿದೆ: ಡಿಸಿಎಂ

ಬಾಗಲಕೋಟೆ,ಫೆ. 11 : ದೆಹಲಿ ಫಲಿತಾಂಶ ಬಿಜೆಪಿ ಹಿನ್ನಡೆ ಅಲ್ಲ. ಕೇಜ್ರಿವಾಲ್ ಸರ್ಕಾರ ಜನಪ್ರಿಯ ಯೋಜನೆ ಘೋಷಿಸಿ ಓಟ್ ಬ್ಯಾಂಕ್ ರಾಜಕಾರಣ ಮಾಡಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಟೀಕಿಸಿದರು.
ದೆಹಲಿ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಬಗ್ಗೆ ಬಾಗಲಕೋಟೆಯಲ್ಲಿ ಮಾತನಾಡಿದ ಕಾರಜೋಳ, ದೆಹಲಿ ಒಂದು ಊರಿಗೆ ಸೀಮಿತವಾದ ಆಡಳಿತ. ದೆಹಲಿಯಲ್ಲಿ ಓಟ್ ಬ್ಯಾಂಕ್ ರಾಜಕಾರಣ ಮಾಡಿದರು. ರಾಜಕೀಯ ಗಿಮಿಕ್ ಮಾಡಿದರು ಎಂದು ದೂರಿದರು.
ಕೇಜ್ರಿವಾಲ್ ದೊಡ್ಡ ಆಡಳಿತ ಮಾಡಿದರೆ ಲೋಕಸಭೆಯಲ್ಲಿ ಏಳಕ್ಕೆ ಏಳು ಯಾಕೆ ನಾವು ಗೆದ್ವಿ? ದೇಶದ ಜನ ಬಹಳ ಬುದ್ದಿವಂತರಿದ್ದಾರೆ. ದೇಶವನ್ನು ಸುರಕ್ಷಿತವಾಗಿ ಮುನ್ನೆಡೆಸುವವರು ಯಾರು? ಅವರಿಗೆ ಕೊಡುತ್ತಾರೆ ಅಂತಾ ಸಮರ್ಥಿಸಿಕೊಂಡರು.

Related