ಹಿರಿಯ ಕಲಾವಿಧರ ಸಹಾಯಕ್ಕಿಳಿದ ‘ನಟ’

ಹಿರಿಯ ಕಲಾವಿಧರ ಸಹಾಯಕ್ಕಿಳಿದ ‘ನಟ’

ಬೆಂಗಳೂರು : ರಾಜ್ಯದ್ಯಂತ ಕೊರೋನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಜಾರಿಯಾಗಿದೆ. ಸ್ಯಾಂಡಲ್‌ವುಡ್‌ನ ಅನೇಕ ಹಿರಿಯ ಕಲಾವಿಧರು, ಕೆಲಸವಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು.

ಇಂತಹ ಕಲಾವಿಧರ ನೆರವಿಗೆ ಧಾವಿಸಿರುವಂತ ಕಿಚ್ಚ ಸುದೀಪ್, ಲಾಕ್‌ಡೌನ್ ಸಂಕಷ್ಟಕ್ಕೆ ಸಿಲುಕಿರುವಂತ ಹಿರಿಯ ಕಲಾವಿಧರ ಮನೆ ಮನೆಗೆ ಅಗತ್ಯ ವಸ್ತು ತಲುಪಿಸುವ ಮೂಲಕ, ನೆರವಾಗಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಅಗತ್ಯ ವಸ್ತು ಕೊಂಡುಕೊಳ್ಳೋದಕ್ಕೂ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದಂತ ಹಿರಿಯ ಕಲಾವಿಧರ ಮನೆಯ ಭಾಗಿಲಿಗೇ, ತಮ್ಮ ಟ್ರಸ್ಟ್ ಮೂಲಕ, ಅಗತ್ಯವಸ್ತುಗಳ ಕಿಟ್ ತಲುಪಿಸಿದ್ದಾರೆ.  ಈ ಮೂಲಕ ಹಿರಿಯ ನಟರಿಗೆ ಸುದೀಪ್ ನೆರವಾಗಿದ್ದಕ್ಕೆ, ಕಲಾವಿಧರು ಮೆಚ್ಚುಗೆಯನ್ನು ಕೂಡ ವ್ಯಕ್ತ ಪಡಿಸಿದ್ದಾರೆ.

ಇನ್ನೂ ನಟ ಸುದೀಪ್ ಅಗತ್ಯ ವಸ್ತು ಕಿಟ್ ಜೊತೆಗೆ ಪತ್ರವೊಂದನ್ನು ಸಹ ನೀಡಿದ್ದು, ಅದರಲ್ಲಿ ನನ್ನ ಕುಟುಂಬದ ಹಿರಿಯರು ನೀವು, ನೀವೆಲ್ಲ ಹೇಗಿದ್ದೀರಿ.?ಪ್ರೀತಿಯಿಂದ ನಿಮ್ಮ ಕಿಚ್ಚ ಸುದೀಪ್ ಎಂದು ಬರೆದು, ಹಿರಿಯ ಕಲಾವಿಧರ ಬಗ್ಗೆಯೂ ವಿಚಾರಿಸಿದ್ದಾರೆ.

ಸದ್ಯ ಕಿಚ್ಚ ಸುದೀಪ್ ಮಾಡಿದ ಈ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆವ್ಯಕ್ತವಾಗಿದೆ.

Related