ಬಿಜೆಪಿಬಲಪಡಿಸಲು ಕಾರ್ಯಕರ್ತರು ಶ್ರಮಿಸಬೇಕು

ಬಿಜೆಪಿಬಲಪಡಿಸಲು ಕಾರ್ಯಕರ್ತರು ಶ್ರಮಿಸಬೇಕು

 ಕಮಲನಗರ: ಪಶು ಸಂಗೋಪನೆ ಮತ್ತು ಬೀದರ್ ಜಿಲ್ಲೆಯ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ನೇತೃತ್ವದಲ್ಲಿ ತಾಲೂಕಿನ ಹಳ್ಳಿಗಳಲ್ಲಿ ಬಿಜೆಪಿ ಕಾರ್ಯಕರ್ತರು ತಳಮಟ್ಟದಿಂದ ಪಕ್ಷ ಬಲಪಡೆಸಲು ಶ್ರಮಿಸಬೇಕು ಎಂದು ಔರಾದ ತಾಲ್ಲೂಕು ಬಿಜೆಪಿ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ ಕಾರ್ಯಕರ್ತರಿಗೆ ಸಲಹೆ ನೀಡಿದರು.
ತಾಲೂಕಿನ ಡಿಗ್ಗಿ ಗ್ರಾಮದ ಬೂತ್ ಅಧ್ಯಕ್ಷ ಉಮಾಕಾಂತ ಹೆರೇಮಠ ಭಾನುವಾರ ಅವರ ಮನೆಗೆ ಬಿಜೆಪಿ ನಾಮಫಲ ಅಳವಡಿಸಿ, ಮಾತನಾಡಿ, ಪಕ್ಷದ ವಿಚಾರಧಾರೆಯನ್ನು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ತಿಳಿಸಿ ಹೇಳುವ ಜತೆಗೆ ಸಂಘಟನೆಗೆ ಕಾರ್ಯಕರ್ತರು ಒತ್ತು ನೀಡಬೇಕು ಎಂದು ಹೇಳಿದರು.
ಜಿಲ್ಲಾ ಕಾರ್ಯದರ್ಶಿ ಕಿರಣ ಪಾಟೀಲ್, ಜಿಲ್ಲಾ ಕಾರ್ಯಕಾರಣಿ ಸದಸ್ಯ ಶಿವಾನಂದ ಬಡ್ಡೆ, ಮಂಡಳ ಪ್ರಧಾನ ಕಾರ್ಯದರ್ಶಿ ಖಂಡೋಬಾ ಕಂಗಟೆ, ಗಿರೀಶ ಒಡೆಯಾರ, ಔರಾದ ಎಪಿಎಂಸಿ ಅಧ್ಯಕ್ಷ ರಂಗರಾವ ಜಾಧವ, ಬಸವರಾಜ ಪಾಟೀಲ್, ಬಾಲಾಜಿ ತೇಲಂಗ, ಶ್ರೀರಂಗ ಪರಿಹಾರ, ನಾರಾಯಣ ವಾಘಮಾರೆ, ವಿಜಯಕುಮಾರ ಪಾಟೀಲ್, ಬಂಟಿ ರಾಂಪೂರೆ, ಗಣೇಶ ಕಾರಾಗಾವೆ ಇನ್ನಿತರರಿದ್ದರು.

Related