ಬಳ್ಳಾರಿ : ಕೊಂಡಾಪುರ ನಗರದ 5ನೇ ವಾರ್ಡಿನ ಮಧ್ಯರಾತ್ರಿ ಗುಡಿಸಲಿನಲ್ಲಿ ಕಾಣಿಸಿಕೊಂಡ ಬೆಂಕಿ ಅಕ್ಕಪಕ್ಕದ ಎರಡು ಗುಡಿಸಲಿಗೂ ಹಬ್ಬಿ ಮೂರೂ ಗುಡಿಸಲುಗಳು ಭಸ್ಮವಾಗಿದೆ.
ಗುರುವಾರ ಬೆಳಿಗ್ಗೆ ಶಾಸಕ ಜಿ. ಸೋಮಶೇಖರ್ ರೆಡ್ಡಿ, ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಧಾನ್ಯ, ಆಹಾರದ ವ್ಯವಸ್ಥೆ ಮಾಡಿದರು.
ಕೊಳಚೆ ಪ್ರದೇಶ ಅಭಿವೃದ್ದಿ ಮಂಡಳಿಯಿಂದ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ಈ ವೇಳೆ ಉಪವಿಭಾಗಾಧಿಕಾರಿ ರಮೇಶ ಕೋನರೆಡ್ಡಿ, ತಹಶೀಲ್ದಾರ್ ರೆಹಮಾನ್ ಪಾಶಾ ಭೇಟಿ ನೀಡಿದರು.