ಯುಪಿ ಚುನಾವಣೆಗೆ ಎಎಪಿ ಸ್ಪರ್ಧೆ

ಯುಪಿ ಚುನಾವಣೆಗೆ ಎಎಪಿ ಸ್ಪರ್ಧೆ

ನವದೆಹಲಿ: 2022ರ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಕಣಕ್ಕಿಳಿಯಲಿದೆ ಎಂದು ದೆಹಲಿ ಮುಖ್ಯಮಂತ್ರಿ ಹಾಗೂ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮಾಹಿತಿ ನೀಡಿದರು.

ಎಂಟು ವರ್ಷಗಳಲ್ಲಿ ಮೂರು ಬಾರಿ ಆಮ್ ಆದ್ಮಿ ಪಕ್ಷ ಅಧಿಕಾರದ ಗದ್ದುಗೆ ಏರಿದೆ. ದೆಹಲಿ ಜನತೆಯ ಸಲಹೆಯ ಮೇರೆಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಸ್ಪರ್ಧೆ ನೀಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉತ್ತರ ಪ್ರದೇಶದ ಎಲ್ಲ ಪಕ್ಷಗಳು  ಭ್ರಷ್ಟಾಚಾರದಲ್ಲಿ ಪರಸ್ಪರರನ್ನು ಮೀರಿದ್ದು, ಜನರಿಗೆ ದ್ರೋಹ ಬಗೆದಿವೆ. ಯುಪಿ ರಾಜಕೀಯದಲ್ಲಿ ಉತ್ತಮ ಉದ್ದೇಶವಿಲ್ಲ, ಎಎಪಿ ತನ್ನ ಪಕ್ಷಕ್ಕೆ ಒಂದು ಅವಕಾಶ ಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿತು. ಉತ್ತರ ಪ್ರದೇಶದ ಜನರು ಇತರ ಪಕ್ಷಗಳನ್ನು ಮರೆಯುತ್ತಾರೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಕೇಜ್ರೀವಾಲ್ ಹೇಳಿದರು.

Related